Connect with us

    LATEST NEWS

    ಉಡುಪಿ – ತಿಥಿಗೆ ಸಂಬಂಧಿಸಿದ ಪೂಜಾ ಕಾರ್ಯ ನೀಡಿಲ್ಲ ಎಂದು ಮನೆಗೆ ನುಗ್ಗಿ ಪುರೋಹಿತರೊಬ್ಬರ ಗಲಾಟೆ

    ಉಡುಪಿ ಮಾರ್ಚ್ 10: ತಿಥಿ ಕಾರ್ಯದ ಪೂಜಾ ಕಾರ್ಯಗಳನ್ನು ತನಗೆ ನೀಡಿಲ್ಲ ಅನ್ನೋ ಕಾರಣಕ್ಕೆ ತಿಥಿ ಕಾರ್ಯಕ್ರಮ ನಡಯುತ್ತಿದ್ದ ಮನೆಗೆ ತೆರಳಿ ಪುರೋಹಿತರೊಬ್ಬರು ಧಾಂಧಲೆ ನಡೆಸಿ ,ಅವ್ಯಾಚ್ಯ‌ ಶಬ್ದಗಳಿಂದ ನಿಂದಿಸಿದ ಘಟನೆ ಉಡುಪಿಯ ಕರ್ಜೆ ಗ್ರಾಮದಲ್ಲಿ ನಡೆದಿದೆ.ಈ ಬಗ್ಗೆ ಬ್ರಹ್ಮಾವರ‌‌ ಠಾಣೆಯಲ್ಲಿ ದೂರು‌ ದಾಖಲಾಗಿದೆ.

    ಹೊಸೂರು ಗ್ರಾಮದ ರಾಘವೇಂದ್ರ ಎಂಬವರ ತಾಯಿ ಮೃತಪಟ್ಟಿದ್ದು, ಮೃತರ ಶ್ರಾದ್ದ ಕಾರ್ಯಕ್ರಮ ಮಾರ್ಚ್‌ 6 ರಂದು ರಾಘವೇಂದ್ರ ಅವರ ಮನೆಯಲ್ಲೇ ನೆರವೇರಿಸಲಾಗಿತ್ತು. ಆದ್ರೆ, ಶ್ರಾದ್ಧ ಕಾರ್ಯಕ್ರಮಗಳು ಮುಗಿಯುತ್ತಿದ್ದಂತೆ ಮನೆಗೆ ಬಂದ ಅರ್ಚಕ ರಾಮಕೃಷ್ಣ ಎಂಬವರು ಮನೆಯವರನ್ನು ಅವಾಚ್ಯ ಪದಗಳಿಂದ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಕುಟುಂಬನ್ನು ಸರ್ವನಾಶ ಮಾಡುತ್ತೇನೆ ಎಂದು ಬೆದರಿಕೆ ಕೂಡಾ ಹಾಕಿದ್ದಾರೆ ಎಂದು ಹೇಳಲಾಗಿದೆ.


    ರಾಘವೇಂದ್ರ ಅವರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು, ಅರ್ಚಕ ರಾಮಕೃಷ್ಣ ಅವರ ಮಾತಿಗೆ ಭಯಗೊಂಡಿದ್ದಾರೆ. ಬಳಿಕ ಬ್ರಹ್ಮಾವರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅರ್ಚಕ ರಾಮಕೃಷ್ಣ  ಎಸ್‌ಸಿ ಎಸ್‌ಟಿ ಕಾಯ್ದೆಯಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply