LATEST NEWS
ರಾಜಸ್ಥಾನದಲ್ಲಿ ಟ್ರಕ್ ಗೆ ಕಾರು ಡಿಕ್ಕಿ,ಇಬ್ಬರು ಮಕ್ಕಳು ಸೇರಿ 7 ಮಂದಿ ಸಜೀವ ದಹನ..!
ಇಂದೋರ್ : ರಾಜಸ್ಥಾನದ ಚುರು ಜಿಲ್ಲೆಯ ಚುರು-ಸಲಸರ್ ಹೆದ್ದಾರಿಯಲ್ಲಿ ಟ್ರಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 4 ಮತ್ತು 7 ವರ್ಷದ ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಸಜೀವ ದಹನವಾಗಿದ್ದಾರೆ.
ಕುಟುಂಬವು ಸಲಾಸರ್ ಬಾಲಾಜಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಕುಟುಂಬ ಹಿಂದಿರುಗುತ್ತಿತ್ತು ಎಂದು ಎಸ್ಎಚ್ಒ ಸುಭಾಷ್ ಬಿಕಾರಿಯಾ ತಿಳಿಸಿದ್ದಾರೆ. ಮೃತರಲ್ಲಿ ಇಬ್ಬರು ಮಕ್ಕಳು, ಮೀವರು ಮಹಿಳೆಯರು ಸೇರಿ ಒಟ್ಟು 7 ಮಂದಿ ಸ್ಥಳದಲ್ಲಿ ಸಜೀವ ದಹನ ಗೊಂಡಿದ್ದಾರೆ. ಮಾಹಿತಿ ಪಡೆದ ನಂತರ ಪೊಲೀಸರು ಧಾವಿಸಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಬೆಂಕಿಯನ್ನು ನಂದಿಸಿದರು ಎಂದು ಅವರು ಹೇಳಿದರು. ಮೃತರನ್ನು ಉತ್ತರ ಪ್ರದೇಶದ ಮೀರತ್ ನಗರದ ನಿವಾಸಿಗಳಾದ ನೀಲಂ ಗೋಯಲ್, ಅಶುತೋಷ್ ಗೋಯಲ್, ಮಂಜು ಬಿಂದಾಲ್, ಹಾರ್ದಿಕ್ ಬಿಂದಾಲ್, ಸ್ವಾತಿ ಬಿಂದಾಲ್, ದೀಕ್ಷಾ ಮತ್ತು ನಾಲ್ಕು ವರ್ಷದ ಮಗು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಚಲಿಸುತ್ತಿದ್ದ ಟ್ರಕ್ ನ ಹಿಂಬದಿ ಕಾರು ಬಂದು ಹೊಡೆದ ಪರಿಣಾಮ ಕಾರಿಗೆ ಬೆಂಕಿ ಹತ್ತಿಕೊಂಡು ಈ ದುರ್ಘಟನೆ ಸಂಭವಿಸಿದೆ ಎಂದು ಮಾಹಿತಿ ಪೊಲೀಸರು ನೀಡಿದ್ದಾರೆ.
You must be logged in to post a comment Login