Connect with us

    BELTHANGADI

    ಮಣ್ಣಿನಡಿ ಸಿಲುಕಿದ್ದ ಟಿಪ್ಪರ್ ಚಾಲಕ ರಕ್ಷಣೆ

    ಮಣ್ಣಿನಡಿ ಸಿಲುಕಿದ್ದ ಟಿಪ್ಪರ್ ಚಾಲಕ ರಕ್ಷಣೆ

    ಬೆಳ್ತಂಗಡಿ ಫೆಬ್ರವರಿ 19: ಬೃಹತ್ ಗುಡ್ಡವನ್ನು ಅಪಾಯಕಾರಿ ರೀತಿಯಾಗಿ ಸಮತಟ್ಟು ಮಾಡುವ ಸಂದರ್ಭ ಗುಡ್ಡ ಕುಸಿತ ಉಂಟಾದ ಘಟನೆ ನಡೆದಿದೆ.

    ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿ ಮಡಂತ್ಯಾರು ಎಂಬಲ್ಲಿ ನಡೆದಿದೆ. ಗುಡ್ಡವನ್ನು ಸಮತಟ್ಟು ಮಾಡುವ ಕೆಲಸ ಕೆಲವು ದಿನಗಳಿಂದ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಇಂದು ಜೆಸಿಬಿ ಬಳಸಿ ಗುಡ್ಡವನ್ನು ಸಮತಟ್ಟು ಮಾಡುವ ಸಂದರ್ಭ ಗುಡ್ಡದ ಮಣ್ಣು ಕುಸಿದಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ಟಿಪ್ಪರ್ ಚಾಲಕ ಮಣ್ಣಿನಡಿ ಸಿಲುಕಿ ಹಾಕಿಕೊಂಡಿದ್ದ, ಕೂಡಲೇ ರಕ್ಷಣೆಗೆ ಧಾವಿಸಿದ ಸ್ಥಳೀಯರು ಟಿಪ್ಪರ್ ಚಾಲಕನನ್ನು ಮಣ್ಣಿನಡಿಯಿಂದ ತೆಗೆಯಲು ಯಶಸ್ವಿಯಾಗಿದ್ದಾರೆ.

    ಟಿಪ್ಪರ್ ಚಾಲಕನನ್ನು ದೀಪಕ್ ಎಂದು ಗುರುತಿಸಲಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply