Connect with us

    DAKSHINA KANNADA

    ಮಂಗಳೂರು ರೈಲ್ವೇ ಪೊಲೀಸ್ ಸಿಬ್ಬಂದಿಯ ಸಕಾಲಿಕ ಸಮಯಪ್ರಜ್ಞೆ,ಉಳಿಯಿತು ಪ್ರಯಾಣಿಕನ ಜೀವ..!

    ಮಂಗಳೂರು: ರೈಲ್ವೇ ಪೊಲೀಸ್ ಸಿಬಂದಿಯ ಸಕಾಲಿಕ ಸಮಯ ಪ್ರಜ್ಞೆಯಿಂದ ಪ್ರಯಾಣಿಕನೋರ್ವನ ಜೀವ ಉಳಿದ ಘಟನೆ ಮಂಗಳೂರಿನಲ್ಲಿ ಭಾನುವಾರ ರಾತ್ರಿ ನಡೆದಿದೆ. .

    ನಗರದ ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿಗೆ ಏರಲು ಪ್ರಯತ್ನಿಸಿದ ಪ್ರಯಾಣಿಕನೊಬ್ಬ ಪ್ರಾಣಾಪಾಯಕ್ಕೆ ಸಿಲುಕಿದ್ದ. ಇದನ್ನು ದೂರದಿಂದ ಗಮನಿಸಿದ ರೈಲ್ವೇ ಪೊಲೀಸ್ ವಿಭಾಗದ ಹೆಡ್ ಕಾನ್‌ಸ್ಟೆಬಲ್ ಒಬ್ಬರು ಧಾವಿಸಿ ಬಂದು ಅವರ ಪ್ರಾಣ ರಕ್ಷಿಸಿದ್ದಾರೆ.  ರವಿವಾರ ರಾತ್ರಿ ಈ ಘಟನೆ ನಡೆದಿದೆ. ರಾತ್ರಿ 9.35ರ ವೇಳೆಗೆ ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ಚಲಿಸುತ್ತಿದ್ದ ನೇತ್ರಾವತಿ ಎಕ್ಸ್‌ಪ್ರೆಸ್ ರೈಲು ಏರಲು ಪ್ರಯಾಣಿಕ ಸಸಂಗ್ ಎಂಬವರು ಪ್ರಯತ್ನಿಸಿದ್ದರು. ಈ ವೇಳೆ ಆಯಾ ತಪ್ಪಿ ಆತ ರೈಲು ಹಳಿ ಮೇಲೆ ಬೀಳುವುದರಲ್ಲಿದ್ದಾಗ ಅಲ್ಲೇ ದೂರದಲ್ಲಿದ್ದ ಹೆಡ್ ಕಾನ್‌ಸ್ಟೆಬಲ್ ಎಂ. ರಾಘವನ್ ಧಾವಿಸಿ ಬಂದು  ಕೈ ಹಿಡಿದು ಮೇಲಕೆತ್ತಿ ರಕ್ಷಿಸಿ ಪ್ರಾಣ ಉಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply