Connect with us

    DAKSHINA KANNADA

    ಶಾಸಕ ಡಾ. ಭರತ್ ಶೆಟ್ಟಿಗೆ ಬೆದರಿಕೆ, SDPI ಮುಖಂಡ ರಿಯಾಜ್ ಕಡಂಬು ವಿರುದ್ದ ದೂರು ದಾಖಲು

    ಸುರತ್ಕಲ್ :  ನಾವು ಕಾನೂನು, ಸಂವಿಧಾನವನ್ನು ಗೌರವಿಸುತ್ತಿರುವುದಕ್ಕೆ ಭರತ್ ಶೆಟ್ಟಿ ಉಸಿರಾಡುತ್ತಿದ್ದಾರೆ ಎಂದು ಸಂವಿಧಾನಿಕವಾಗಿ ಆಯ್ಕೆಯಾದ ಮಂಗಳೂರು ಉತ್ತರ ಶಾಸಕರ ಮೇಲೆ ತನ್ನ ಭಾಷಣದಲ್ಲಿ ಮುಕ್ತವಾಗಿ ಬೆದರಿಕೆ ಹಾಕಿದ ಎಸ್ ಡಿಪಿಐ ನ ರಿಯಾಜ್ ಕಡಂಬು ವಿರುದ್ದ ಮಂಗಳೂರಿನಲ್ಲಿ ದೂರು ದಾಖಲಾಗಿದೆ.

    ನಗರದ ಕಾವೂರು ಪೊಲೀಸ್ ಸ್ಟೇಷನ್ ನಲ್ಲಿ ಬಿಜೆಪಿ ಯುವ ಮೋರ್ಚಾ ಮಂಗಳೂರು ಉತ್ತರದ ತಂಡದಿಂದ ದೂರು ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭರತ್ ರಾಜ್ ಕೃಷ್ಣಾಪುರ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ಅಶ್ರಿತ್ ನೊಂಡ, ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಸಂಜಿತ್ ಶೆಟ್ಟಿ , ಯುವ ಮೋರ್ಚಾ ಉತ್ತರ ಮಂಡಲ ಅಧ್ಯಕ್ಷರಾದ ರಕ್ಷಿತ್ ಆರ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸಾಕ್ಷಾತ್ ಶೆಟ್ಟಿ, ಯಶ್ ಪಾಲ್ ಸಾಲ್ಯಾನ್, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

    ಇದನ್ನೂ ಓದಿ..

    ‘ಹಿಂದೂಗಳು ಕರುಣೆ ತೋರಿದ್ದರಿಂದ ನೀವು ದೇಶದಲ್ಲಿದ್ದೀರಿ’: ರಿಯಾಜ್ ಕಡಂಬುಗೆ ರಾಜೇಶ್ ಕೊಟ್ಟಾರಿ ತಿರುಗೇಟು..!

    Share Information
    Advertisement
    Click to comment

    You must be logged in to post a comment Login

    Leave a Reply