Connect with us

    DAKSHINA KANNADA

    ಮಂಗಳೂರು ನಗರದಲ್ಲೇ ಸ್ಫೋಟಕ್ಕೆ ನಡೆದಿತ್ತ ಪ್ಲಾನ್..? ಮಂಗಳೂರಿಗೆ ಬಂದ NIA ತಂಡ

    ಮಂಗಳೂರು, ನವೆಂಬರ್ 20: ನಗರದ ನಾಗುರಿಯಲ್ಲಿ ನಡೆದ ಆಟೋರಿಕ್ಷಾದಲ್ಲಿ ಸ್ಫೋಟ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಮಂಗಳೂರು ನಗರದಲ್ಲೇ ಸ್ಫೋಟಕ್ಕೆ ನಡೆದಿತ್ತ ಪ್ಲಾನ್..? ಎನ್ನುವ ಅನುಮಾನ ಮೂಡಿದೆ.

    ಅಟೋಗೆ ಹತ್ತಿದವನೇ ಪಂಪುವೆಲ್ ಸರ್ಕಲ್ ಗೆ ಬಿಡಿ ಅಂತ ಹೇಳಿದ್ದ, ಜಂಕ್ಷನ್ ರೈಲ್ವೆ ನಿಲ್ದಾಣದಿಂದ ಪಂಪ್ವೆಲ್ ನಿಲ್ದಾಣಕ್ಕಿರುವ ಒಂದೂವರೆ ಕೀಮೀ ದೂರವಿತ್ತು. ನಿನ್ನೆ ಮಂಗಳೂರಿನಲ್ಲಿ ಮಧ್ಯಾಹ್ನ ತನಕ ಕಾರ್ಯಕ್ರಮದಲ್ಲಿದ್ದ ಸಿಎಂ‌ ಬೊಮ್ಮಾಯಿ ಭಾಗಿಯಾಗಿದ್ದರು.

    ಮಂಗಳೂರಿನ ಸಂಘನಿಕೇತನದಲ್ಲೂ ಕನ್ನಡ‌ಶಾಲಾ ಮಕ್ಕಳ ಹಬ್ಬವಿತ್ತು. ಹದಿನೈದು ಸಾವಿರಕ್ಕೂ ಅಧಿಕ ಮಕ್ಕಳು ಕನ್ನಡ ಶಾಲಾ ಮಕ್ಕಳ ಹಬ್ಬ ಸೇರಿದ್ದರು. ಮಂಗಳೂರಿನಲ್ಲಿ ಇಂದು ನಡೆಯುತ್ತಿರುವ ಎಲ್ಲಾ ಕಾರ್ಯಕ್ರಮ ಗಳಿಗೆ ಪೊಲೀಸ್ ಭಧ್ರತೆ ನೀಡಲಾಗಿದೆ.

    ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡುತ್ತಿದ್ದ ಅನುಮಾನಿತ ಪ್ರಯಾಣಿಕ

    ಆಸ್ಪತ್ರೆಗೆ ದಾಖಲಿಸುವ ಸಂದರ್ಭ ಅನುಮಾನಿತ ಪ್ರಯಾಣಿಕನಿಂದ ಕನ್ನಡದಲ್ಲಿ ಸಹಾಯ ಯಾಚನೆ ಮಾಡಿತ್ತಿದ್ದ, ತುರ್ತು ಚಿಕಿತ್ಸಾ ಘಟಕಕ್ಕೆ ತರುವ ಸಂದರ್ಭದಲ್ಲಿ ನನಗೆ ಟ್ರೀಟ್ಮೆಂಟ್ ಕೊಡಿ ಎಂದು ಅಂಗಲಾಚಿದ್ದ ಎಂದು ಆಸ್ಪತ್ರೆಯ ಸಿಬ್ಬಂದಿಯಿಂದ ಮಾಹಿತಿ ನೀಡಿದ್ದಾರೆ. ದೇಹದ ಕೆಲವು ಭಾಗ , ಬೆನ್ನು ಹಾಗು ತಲೆ ಭಾಗದಲ್ಲಿ ತೀವ್ರ ಗಾಯಗೊಂಡಿತ್ತು.

    ಐವರು ಅಧಿಕಾರಿಗಳಿದ್ದ NIA ತಂಡ

    ಗಾಯಾಳು ಪ್ರಯಾಣಿಕ ಮತ್ತು ಆಟೋ ಚಾಲಕ ಇಬ್ಬರಿಗೂ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಐವರು ಅಧಿಕಾರಿಗಳಿರುವ NIA ತಂಡ, ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಐಸಿಯುನಲ್ಲಿ ಭೇಟಿ ಮಾಡಲಿರುವ ಅಧಿಕಾರಿಗಳು.

     

    Share Information
    Advertisement
    Click to comment

    You must be logged in to post a comment Login

    Leave a Reply