Connect with us

    LATEST NEWS

    ಮಂಗಳೂರಿನಲ್ಲಿ ಭಾರಿ ಮಳೆ ಮಧ್ಯೆ ಹೆಚ್ಚುತ್ತಿದೆ ಕಳ್ಳತನ, ಕೋಡಿಕಲ್ ನಲ್ಲಿ ಮನೆ ಕಿಟಕಿ ಸರಳು ತುಂಡರಿಸಿ ನಗದು ಕಳವು..!

    ಮಂಗಳೂರು : ಮಂಗಳೂರಿನಲ್ಲಿ ನಿರಂತರ ಸುರಿಯುವ ಮಳೆ ಕಳ್ಳ ಖದೀಮರಿಗೆ ವರದಾನವಾಗಿದೆ. ನಗರ ಅನೇಕ ಕಡೆ ಮಳೆ ಮಧ್ಯೆ ರಾತ್ರಿ ವೇಳೆ ಮನೆಗಳನ್ನು ಒಡೆದು ಕಳ್ಳತನ ಮಾಡುವುದು ಹೆಚ್ಚುತ್ತಿದೆ.

    ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್ ವಿವೇಕಾನಂದ ನಗರ ವಾಸಿ ಪ್ರದೀಪ್ ರವರ ಮನೆಯ ಬೆಡ್ ರೂಮಿನ ಕಿಟಕಿಯ ಸರಳುಗಳನ್ನು ತುಂಡರಿಸಿ ಒಳಬಂದ ಕಳ್ಳರ ತಂಡ ಮನೆಯನ್ನು ಜಾಲಾಡಿ ರೂಮಿನಲ್ಲಿದ್ದ ಕಪಾಟು ಒಡೆದು ಕಪಾಟಿನಲ್ಲಿ ಇಟ್ಟಿದ್ದ ರೂ 10,000 ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಮೊ ಸಂ 68/2024 ಕಲಂ 331 (4), 305 ಬಿಎನ್ಎಸ್ ಅಡಿ ಪ್ರಕರಣ ದಾಖಲಿಸಲಾಗಿರುತ್ತದೆ. ಇನ್ನೂ ಕರಾವಳಿಯಲ್ಲಿ 5 ದಿನ ಭಾರಿ ಮಳೆ ಸುರಿಯುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮಳೆಗಾಲ ಸಂದರ್ಭ ಮನೆಯಲ್ಲಿ ಬೆಲೆ ಬಾಳುವ ಅನಗತ್ಯ ಚಿನ್ನ ಒಡವೆಗಳನ್ನು, ನಗ ನಗದುಗಳನ್ನು ಬ್ಯಾಂಕ್ ಲಾಕರ್ ನ ಭದ್ರತೆಯಲ್ಲಿಡಬೇಕೆಂದು ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply