Connect with us

MANGALORE

ಮಂಗಳೂರು – ದೈವಸ್ಥಾನಗಳಲ್ಲಿ ಕಳ್ಳರ ಕೈಚಳಕ

ಮಂಗಳೂರು ಸೆಪ್ಟೆಂಬರ್ 5: ಮೂರು ದೈವಸ್ಥಾನಗಳಿಗೆ ಕಳ್ಳರು ನುಗ್ಗಿ ಕಾಣಿಕೆ ಡಬ್ಬಿಯಲ್ಲಿದ್ದ ಹಣವನ್ನು ದೋಚಿದ ಘಟನೆ ನೀರುಮಾರ್ಗ ಶಾಂತಿಗುರಿಯಲ್ಲಿ ನಡೆದಿದೆ.

ಶನಿವಾರ ರಾತ್ರಿ 7ಗಂಟೆ ಸುಮಾರಿಗೆ ದೈವಸ್ಥಾನದ ಚಾಕರಿಯವರು ದೀಪವಿಟ್ಟು ಬಾಗಿಲು ಹಾಕಿ ಹೋಗಿದ್ದರು. ಭಾನುವಾರ ಬೆಳಗ್ಗೆ ಬಂದು ನೋಡುವಾಗ ಕಳವು ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.

ಮುಖ್ಯ ರಸ್ತೆ ಬದಿಯಲ್ಲಿದ್ದ ಕಾಣಿಕೆ ಡಬ್ಬಿ ಹಾಗೂ ದೈವಸ್ಥಾನದ ಹೊರಗಡೆಯಿದ್ದ ಕಾಣಿಕೆ ಡಬ್ಬಿಯನ್ನು ಕಳವುಗೈದಿದ್ದಾರೆ. ಬಳಿಕ ಬಾಗಿಲು ಮುರಿದು ಒಳ ಪ್ರವೇಶಿಸಿದ ಕಳ್ಳರು ದೈವಸ್ಥಾನದ ಒಳಗಿದ್ದ ಕಾಣಿಕೆ ಡಬ್ಬಿಯ ಬೀಗ ಮುರಿದು ನಗದು ಕಳವುಗೈದಿದ್ದಾರೆ.
ದೈವಸ್ಥಾನದ ಮೂರು ಕಾಣಿಕೆ ಡಬ್ಬಿಗಳನ್ನು ಕಳವುಗೈದ ಕಳ್ಳರು ದೈವಸ್ಥಾನದ ಒಳಗಿದ್ದ 7 ಪವನ್ ಚಿನ್ನದ ನಾಲಗೆ, ಬೆಳ್ಳಿಯ ಸೊತ್ತುಗಳು, ಮೊಗ ಸೇರಿದಂತೆ ಇತರ ವಸ್ತುಗಳನ್ನು ಬಿಟ್ಟು ಹೋಗಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *