Connect with us

DAKSHINA KANNADA

ಮಂಗಳೂರು : ಮಣ್ಣಗುಡ್ಡ ಶ್ರೀ ಮಡಕೈ ನವದುರ್ಗಾ ಮಹಾಗಣಪತಿ ಕ್ಷೇತ್ರಕ್ಕೆ ಶ್ರೀಪರ್ತಗಾಳಿ ಗೋಕರ್ಣ ಮಠಾಧೀಶರ ಭೇಟಿ

ಮಂಗಳೂರು ನಗರದ ಮಣ್ಣಗುಡ್ಡೆಯ ಶ್ರೀ ಮಡಕೈ ನವದುರ್ಗಾ ಮಹಾಗಣಪತಿ ಕ್ಷೇತ್ರಕ್ಕೆ ಪರ್ತಗಾಳಿ ಗೋಕರ್ಣ ಮಠಾಧೀಶರಾದ ವಿದ್ಯಾಧೀಶ ತೀರ್ಥ ಶ್ರೀಪಾದರು ಭೇಟಿ ನೀಡಿ, ಭಕ್ತಾದಿಗಳಿಗೆ ಆಶೀರ್ವಾಚನ ಮಾಡಿ ಪ್ರಸಾದ ವಿತರಿಸಿದರು. 

ಮಂಗಳೂರು : ಮಂಗಳೂರು ನಗರದ ಮಣ್ಣಗುಡ್ಡೆಯ ಶ್ರೀ ಮಡಕೈ ನವದುರ್ಗಾ ಮಹಾಗಣಪತಿ ಕ್ಷೇತ್ರಕ್ಕೆ ಪರ್ತಗಾಳಿ ಗೋಕರ್ಣ ಮಠಾಧೀಶರಾದ ವಿದ್ಯಾಧೀಶ ತೀರ್ಥ ಶ್ರೀಪಾದರು ಭೇಟಿ ನೀಡಿ, ಭಕ್ತಾದಿಗಳಿಗೆ ಆಶೀರ್ವಾಚನ ಮಾಡಿ ಪ್ರಸಾದ ವಿತರಿಸಿದರು.

ಕ್ಷೇತ್ರಕ್ಕೆ ಆಗಮಿಸಿದ ಶ್ರೀ ಪರ್ತಗಾಳಿ ಗೋಕರ್ಣ ಮಠಾಧೀಶರನ್ನು  ದೇವಾಲಯದ ಪರವಾಗಿ ನವದುರ್ಗಾ ಮಹಿಳಾ ಮಂಡಳಿಯ ಸದಸ್ಯರು ಪೂರ್ಣಕುಂಭ, ವಾದ್ಯ, ವೇದಘೋಷಗಳೊಂದಿಗೆ ಸ್ವಾಗತಿಸಿದರು.

ಶ್ರೀ ದೇವರ ಭೇಟಿ, ಮಂಗಳಾರತಿ, ಸಭಾಕಾರ್ಯಕ್ರಮ ಹಾಗೂ ಶ್ರೀಗಳಿಗೆ ದೇವಾಲಯದ ವತಿಯಿಂದ ಪಾದಪೂಜೆ ಜರುಗಿತು. ಸ್ವಾಮೀಜಿಯವರಿಂದ ಆಶೀರ್ವಾಚನ, ಬಂದಂತಹ ಭಕ್ತಭಿಮಾನಿಗಳಿಗೆ ಫಲಮಂತ್ರಕ್ಷತೆ ವಿತರಣಾ ಕಾರ್ಯಕ್ರಮ ಜರುಗಿತು. ದೇವಸ್ಥಾನದ ಆಡಳಿತ ಮುಕ್ತೇಸರರಾದ  ವಿಶ್ವನಾಥ್ ಭಟ್ ರವರು ಸ್ವಾಗತಿಸಿದರು.

ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ  ಸ್ಟ್ಯಾನಿ ಅಲ್ವಾರಿಸ್ , ಸದಸ್ಯರಾದ ಸಮರ್ಥ್ ಭಟ್ , ನವೀನ್ ಲೋಬೊ,ನವದುರ್ಗಾ ಮಹಿಳಾಮಂಡಳಿಯ ಸದಸ್ಯರು ಹಾಗೂ ನೂರಾರು ಮಂದಿ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.  ದೇವಸ್ಥಾನ ಪ್ರಧಾನ ಅರ್ಚಕರಾದ  ಸತೀಶ್ ಭಟ್ ರವರು  ಪ್ರಾಸ್ತವಿಕ ಭಾಷಣ  ಬಳಿಕ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *