Connect with us

DAKSHINA KANNADA

13 ವರ್ಷಗಳ ಹಿಂದೆ ವ್ಯಕ್ತಿಯೋರ್ವನ ಸಾವಿಗೆ ಕಾರಣನಾದ ಲಾರಿ ಚಾಲಕನಿಗೆ ಜೈಲು ಶಿಕ್ಷೆ ನೀಡಿದ ಪುತ್ತೂರು ನ್ಯಾಯಾಲಯ..!

ವ್ಯಕ್ತಿಯೋರ್ವ ಸಾವಿಗೆ ಕಾರಣನಾದ ಲಾರಿ ಚಾಲಕನಿಗೆ ಪುತ್ತೂರು ನ್ಯಾಯಾಲಯ ದಂಡದೊಂದಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.  ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ವೀರ ಮಂಗಲ ನಿವಾಸಿ ಲಾರಿ ಚಾಲಕ ಗೌಸ್ ಬ್ಯಾರಿ ಶಿಕ್ಷೆಗೊಳಗಾದ ಅಪರಾಧಿಯಾಗಿದ್ದಾನೆ .

ಪುತ್ತೂರು  :  ವ್ಯಕ್ತಿಯೋರ್ವ ಸಾವಿಗೆ ಕಾರಣನಾದ ಲಾರಿ ಚಾಲಕನಿಗೆ ಪುತ್ತೂರು ನ್ಯಾಯಾಲಯ ದಂಡದೊಂದಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.  ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ವೀರ ಮಂಗಲ ನಿವಾಸಿ ಲಾರಿ ಚಾಲಕ ಗೌಸ್ ಬ್ಯಾರಿ ಶಿಕ್ಷೆಗೊಳಗಾದ ಅಪರಾಧಿಯಾಗಿದ್ದಾನೆ .

2011 ರಲ್ಲಿ ಕಡಬ ಜೂನಿಯರ್ ಕಾಲೇಜು ಮೈದಾನದ ಬಳಿ ಲಾರಿಯಲ್ಲಿ ಮರದ ತುಂಡುಗಳನ್ನು ಅಬ್ದುಲ್ ಕುಂಞ ಎಂಬವರು ಲಾರಿಗೆ ಲೋಡು ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಲಾರಿ ಚಾಲಕ ಗೌಸ್ ಅಜಾಗರೂಕತೆ ಮತ್ತು ನಿರ್ಲಕ್ಷದಿಂದ ಚಲಾಯಿಸಿದ ಪರಿಣಾಮ ಮರದ ತುಂಡುಗಳು ಬಿದ್ದು ಕೆಳಕ್ಕೆ ಬಿದ್ದು ಗಂಭೀರ ವ್ಯಕ್ತಿಯೋರ್ವ ಗಾಯಗೊಂಡು ಮೃತಪಟ್ಟಿದ್ದರು. ಈ ಬಗ್ಗೆ ಕುಟ್ರುಪ್ಪಾಡಿ ಗ್ರಾಮದ ಅಲೆಕ್ಕಾಡಿ ಯ ಅಬ್ದುಲ್ ರಹಿಮಾನ್ ಎಂಬವರು ನೀಡಿದ ದೂರಿನಂತೆ ಕಡಬ ಠಾಣಾ ಆ. ಕ್ರ. 139/2011 ಕಲಂ 304(A) ಪ್ರಕರಣ ದಾಖಲಾಗಿತ್ತು. ಇದೀಗ ಮಾನ್ಯ ಪುತ್ತೂರು ನ್ಯಾಯಾಲಯವು ಪ್ರಕರಣದ ವಾರಂಟ್ ಆರೋಪಿ ಚಾಲಕ ಗೌಸ್‌ ಗೆ 6 ತಿಂಗಳ ಜೈಲು ಶಿಕ್ಷೆ ಮತ್ತು ದಂಡ  ರೂ. 1000 ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *