Connect with us

    LATEST NEWS

    ಶಿಕ್ಷಕರಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ

    ಶಿಕ್ಷಕರಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ

    ಕುಮಟಾ, ಮಾರ್ಚ್ 24  : ಉತ್ತರ ಕನ್ನಡ ಜಿಲ್ಲೆಯ  ಕುಮಟಾ ತಾಲೂಕಿನ ಯಾಣ ಕ್ರಾಸ್ ಬಳಿ ಶಿಕ್ಷಕರಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

    ಇವರು ಮೂಲತಃ ಮುಂಡಗೋಡವರಾಗಿದ್ದು ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

    ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇವರು ಇದೇ ತಿಂಗಳ 3 ನೇ ತಾರಿಕಿಗೆ ಯಾಣಾ ಬಂದಿದ್ದರೆಂದು ತಿಳಿದು ಬಂದಿದ್ದು,

    ಆತ್ಮ ಹತ್ಯೆ ಮಾಡಿಕೊಂಡು 18 ದಿನಗಳ ಹಿಂದೆಯೇ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

    ಶಿಕ್ಷಕರಿಬ್ಬರು ಘಟನಾ ಸ್ಥಳದಲ್ಲಿ ಬೈಕ್ ನಿಲ್ಲಿಸಿ ಅದರ ಮೇಲೆ ಹತ್ತಿ ನೇಣು ಬಿಗಿದುಕೊಂಡಿರಬಹುದು ಎನ್ನಲಾಗುತ್ತಿದೆ.

    ಇವರು ಮುಂಡಗೋಡದ ಪ್ರತಿಷ್ಠಿತ ಹೈಸ್ಕೂಲ್ ಶಿಕ್ಷಕರಾಗಿದ್ದು ಬಂಟವಾಳ ಮೂಲದವರೆಂದು ತಿಳಿದುಬಂದಿದೆ.

    ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು ಡೆತ್ ನೋಟ ಬರೆದಿಟ್ಟಿದ್ದರೆಂದು ಹೇಳಲಾಗುತ್ತಿದೆ.

    ಆತ್ಮಹತ್ಯೆ ಮಾಡಿಕೊಂಡವರನ್ನು ಪ್ರಜ್ಙಾ ಪಿ.ಎಸ್ ಮತ್ತು ವಿಠ್ಠಲ ಯಲ್ಲಪ್ಪ ಸುಬ್ಬಣ್ಣನವರ ಎಂದು ಗುರುತಿಸಲಾಗಿದೆ.

    ಕುಮಟಾ ಪೋಲಿಸರು ಅವರ ಮನೆಯವರಿಗೆ ವಿಷಯ ಮುಟ್ಟಿಸಿದ್ದು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply