Connect with us

LATEST NEWS

ತಮಿಳುನಾಡು – ಪೆಟ್ರೋಲ್ ಟ್ರಕ್ ಗೆ ಕಾರು ಡಿಕ್ಕಿ – ಐವರ ದುರ್ಮರಣ

ತಿರುಪುರ್ ನವೆಂಬರ್ 17: ಕಾರು ಮತ್ತು ಟ್ರಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವನಪ್ಪಿದ ಘಟನೆ ತಿರುಪುರ್ ಜಿಲ್ಲೆಯ ಧಾರಾಪುರಂ ಬಳಿಯ ಮನಕಡೌ ಬಳಿ ನಿನ್ನೆ ನಡೆದಿದೆ.


ಮೃತರನ್ನು ತಮಿಳುಮಣಿ (51), ಚಿತ್ರಾ (49), ಸೆಲ್ವರಾಣಿ (70), ಬಾಲಕೃಷ್ಣನ್ (78), ಮತ್ತು ಕಲಾರಾಣಿ (50) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಧಾರಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕಲಾರಾಣಿ ಮೃತಪಟ್ಟಿದ್ದಾರೆ
ಟ್ಯಾಂಕರ್ ಟ್ರಕ್ ಕೊಯಮತ್ತೂರು ಜಿಲ್ಲೆಯ ಇರುಗೂರ್‌ನಿಂದ ದ್ರಾಪುರಂ-ಪಳನಿ ರಸ್ತೆಯ ಮನಕಾಡೌ ಬಳಿ ಪೆಟ್ರೋಲ್ ಸಾಗಿಸುತ್ತಿದ್ದಾಗ ಕೊಯಮತ್ತೂರು ಜಿಲ್ಲೆಯ ಪೆರಿಯನಾಯಕನ್ ಪಾಳ್ಯಂನಿಂದ ದಿಂಡಿಗಲ್ ಜಿಲ್ಲೆಯ ಪಳನಿಗೆ ಮದುವೆ ಸಮಾರಂಭಕ್ಕೆ ಕಾರು ತೆರಳುತ್ತಿತ್ತು


ಧಾರಾಪುರಂ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ನೀಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಗುರುವಾರ ಘೋಷಿಸಿದ್ದಾರೆ . ಮೃತರ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿ ಸಾಂತ್ವನ ಹೇಳಿದರು

Share Information
Advertisement
Click to comment

You must be logged in to post a comment Login

Leave a Reply