Connect with us

LATEST NEWS

ಕೊಲೆ ಮಾಡಿ ಗೋಣಿ ಚೀಲದಲ್ಲಿ ಚರಂಡಿಗೆ ಎಸೆದ ಪ್ರಕರಣ ಇಬ್ಬರ ಬಂಧನ

ಕೊಲೆ ಮಾಡಿ ಗೋಣಿ ಚೀಲದಲ್ಲಿ ಚರಂಡಿಗೆ ಎಸೆದ ಪ್ರಕರಣ ಇಬ್ಬರ ಬಂಧನ

ಮಂಗಳೂರು ಜೂನ್ 5: ಕೊಲೆ ಮಾಡಿ ದೇಹವನ್ನು ಎರಡು ತುಂಡುಗಳನ್ನು ಗೋಣಿ ಚೀಲದಲ್ಲಿ ತುಂಬಿಸಿ ಚರಂಡಿಗೆಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಜೂನ್ 2 ರಂದು ಮಂಗಳೂರು ಹೊರವಲಯದ ಸುರತ್ಕಲ್ ಕೃಷ್ಣಾಪುರ ರಸ್ತೆಯ ಚುಕ್ಕಬೆಟ್ಟು ಎಂಬಲ್ಲಿ ಯ ಚರಂಡಿಯಲ್ಲಿ ಗೋಣಿಚೀಲದಲ್ಲಿ ಮೃತದೇಹ ಪತ್ತೆಯಾಗಿದೆ.

ಬಂಧಿತರನ್ನು ಬಾಗಲಕೋಟೆ ಜಿಲ್ಲೆಯ ಹುನುಗುಂದ ನಿವಾಸಿ ಗೌಡಪ್ಪ ಗೌಡ ಸಣ್ಣಗೌಡ್ರ (55) ಹಾಗು ಕೊಪ್ಪಳ ಜಿಲ್ಲೆಯ ಕುಷ್ಟಗಿ ನಿವಾಸಿ ಹುಲ್ಲಪ್ಪ ಬಸಪ್ಪ ಸೂಡಿ (28) ಅವರನ್ನು ಬಂಧಿಸಲಾಗಿದೆ.

ಕೊಲೆಯಾದ ವ್ಯಕ್ತಿಯನ್ನು ಕೊಪ್ಪಳ ಜಿಲ್ಲೆಯ ಕಬ್ಬರಗಿ ನಿವಾಸಿ ಮರಿಯಪ್ಪ(50) ಎಂದು ಗುರಿತಿಸಲಾಗಿತ್ತು. ಮೃತ ಮರಿಯಪ್ಪ ರವರು ಹುಲ್ಲಪ್ಪ ಮತ್ತು ಸಣ್ಣಗೌಡ್ರು ಎಂಬವರ ಜೊತೆ ವಾಸ ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆತಿತ್ತು. ಈ ಮಾಹಿತಿಯ ಆಧಾರದ ಮೇಲೆ ಗೌಡಪ್ಪ ಗೌಡ, ಸಣ್ಣಗೌಡ್ರು ಎಂಬವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ಒಳಪಡಿಸಿದಾಗ ಕೊಲೆಯ ಸತ್ಯಾಸತ್ಯತೆ ಬಯಲಿಗೆ ಬಂದಿದೆ.

ಮೃತ ಮರಿಯಪ್ಪ ಆರೋಪಿಗಳಿಬ್ಬರು ಒಂದೇ ಕೊಠಡಿಯಲ್ಲಿ ವಾಸವಿದ್ದು, ಆರೋಪಿ ಗೌಡಪ್ಪ ಗೌಡ ಮೃತ ಮರಿಯಪ್ಪ ರವರಿಗೆ ಹಣವನ್ನು ನೀಡಬೇಕಾಗಿದ್ದು, ಈ ವಿಷಯದ ಕುರಿತು ಆರೋಪಿಗಳಿಬ್ಬರು ಸೇರಿ ಮರಿಯಪ್ಪರವರನ್ನು ಕೊಲೆ ಮಾಡಿರುವುದಾಗಿದೆ ತನಿಖೆ ಸಂದರ್ಭದಲ್ಲಿ ಒಪ್ಪಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *