Connect with us

    DAKSHINA KANNADA

     ಸುರತ್ಕಲ್ ಬೀಚ್ ರೋಡ್ ಕುಸಿತ- ಸಂಪರ್ಕ ಕಡಿತ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಡಾ. ಭರತ್ ಶೆಟ್ಟಿ

    ಸುರತ್ಕಲ್ : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಸುರತ್ಕಲ್ ಲೈಟ್ ಹೌಸ್ ಮತ್ತು ಎನ್‌ಐಟಿಕೆ ಸಂಪರ್ಕಿಸುವ ಮುಖ್ಯ ರಸ್ತೆ ಕುಸಿದಿದ್ದು ಘಟನಾ ಸ್ಥಳಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಆ.29ರಂದು  ಈ ರಸ್ತೆ ಬಿರುಕು ಬಿಟ್ಟ ಸ್ಥಿತಿಯಲ್ಲಿತ್ತು. ಶನಿವಾರ ರಸ್ತೆಯ ಅಡಿಭಾಗ ಕುಸಿದು ಡಾಮರು ರಸ್ತೆಯೂ ಅಪಾಯದಲ್ಲಿದೆ. ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಬ್ಯಾರಿಕೇಟ್ ಅಳವಡಿಸಿದ್ದಾರೆ.  ಹೆಚ್ಚಿನ ಹಾನಿಯಾಗದಂತೆ ಮರಳು ಚೀಲವಿಟ್ಟು ಸುರಕ್ಷತೆ ಒದಗಿಸಲು ಶಾಸಕರು ಸೂಚಿಸಿದರಲ್ಲದೆ, ರಸ್ತೆಯ ನಿರ್ಮಾಣಕ್ಕೂ ಪೂರಕ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸಲಹೆ ನೀಡಿದರು. ಮನಪಾ ಸದಸ್ಯರಾದ ಶ್ವೇತ ಪೂಜಾರಿ, ಶೋಭಾ ರಾಜೇಶ್, ಬಿಜೆಪಿ ಪ್ರಮುಖರಾದ ದಿನಕರ್ ಇಡ್ಯಾ, ರಾಜೇಶ್ ಮುಕ್ಕ, ರಾಘವೇಂದ್ರ ಶೆಣೈ ಮತ್ತಿತರರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply