LATEST NEWS
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ 8 ಮಂದಿ ಅರೆಸ್ಟ್ – ಅದರಲ್ಲಿ ಇಬ್ಬರೂ ಹಿಂದೂ

ಮಂಗಳೂರು ಮೇ 03: ಬಜ್ಪೆ ಕಿನ್ನಿಪದವಿನಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಅಬ್ದುಲ್ ಸಫ್ವಾನ್, ನಿಯಾಜ್, ಮೊಹಮ್ಮದ್ ಮುಝಮಿಲ್, ಕಲಂದರ್ ಶಾಫಿ, ರಂಜಿತ್, ನಾಗರಾಜ್, ಮೊಹಮ್ಮದ್ ರಿಝ್ವಾನ್ ಮತ್ತು ಆದಿಲ್ ಮೆಹರೂಫ್ ಎಂದು ಗುರುತಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ 8 ಆರೋಪಿಗಳನ್ನು ಬಂಧಿಸಲಾಗಿದೆ. ಸಫ್ವಾನ್ ಪ್ರಮುಖ ಆರೋಪಿ. 2023ರಲ್ಲಿ ಅಬ್ದುಲ್ ಸಫ್ವಾನ್ ಮೇಲೆ ಮಾರಣಾಂತಿಕ ಹಲ್ಲೆ ಆಗಿತ್ತು. ಸಫ್ವಾನ್ಗೆ ಸುಹಾಸ್ ಶೆಟ್ಟಿ ಕೊಲೆ ಮಾಡುವ ಆತಂಕ ಇತ್ತು. ಹಾಗಾಗಿ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಲು ತೀರ್ಮಾನಿಸಿದ್ದರು. ಅದಕ್ಕಾಗಿ ಫಾಜಿಲ್ ತಮ್ಮನನ್ನು ಸಂಪರ್ಕಿಸಿ ಕೊಲೆ ಮಾಡಲು ತೀರ್ಮಾನಿಸಿದ್ದರು ಎಂದು ಹೇಳಿದ್ದಾರೆ.

ಸುಹಾಸ್ ಕೊಲೆ ಮಾಡಲು ಸಫ್ವಾನ್ ತಂಡಕ್ಕೆ ಆದಿಲ್ 5 ಲಕ್ಷ ರೂ. ಫಂಡಿಂಗ್ ಮಾಡಿದ್ದ. ನಿಯಾಜ್ ಸ್ನೇಹಿತರಾದ ನಾಗರಾಜ್ ಮತ್ತು ರಂಜಿನ್ ಸಂಪರ್ಕ ಮಾಡುತ್ತಾರೆ. ಈ ಇಬ್ಬರು ಸಫ್ವಾನ್ ಮನೆಯಲ್ಲಿ ಎರಡು ದಿನಗಳ ಕಾಲ ವಾಸವಿದ್ದರು. ಮೇ 1ರಂದು ಸುಹಾಸ್ ಚಲನವಲನ ಗಮನಿಸಿ ಕೊಲೆ ಮಾಡಿದ್ದಾರೆ ಎಂದು ಅನುಪಮ್ ಅಗರ್ವಾಲ್ ತಿಳಿಸಿದರು.ನಿಯಾಜ್ ನ ಇಬ್ಬರು ಸ್ನೇಹಿತರು ನಾಗಾರಾಜ್,ಮತ್ತು ರಂಜಿನ್ ನ್ನು ಸಂಪರ್ಕ ಮಾಡುತ್ತಾರೆ. ಈ ಇಬ್ಬರು ಸಫ್ವಾನ್ ಮನೆಯಲ್ಲಿ ಎರಡು ದಿನಗಳಿಂದ ವಾಸ ಮಾಡುತ್ತಾರೆ. ಮೇ ೧ ರಂದು ಸುಹಾಸ್ ಚಲನವಲನಗಳನ್ನು ಗಮನಿಸಿ ಕೊಲೆ ಮಾಡಿದ್ದಾರೆ ಎಂದರು. ಈ ಕೊಲೆ ಪ್ರಕರಣವನ್ನು ರಿವೇಂಜ್ ಅಂತಾ ಹೇಳೊಕೆ ಸದ್ಯ ಸಾಧ್ಯವಿಲ್ಲ ಎಂದ ಪೊಲೀಸ್ ಆಯುಕ್ತರು, ಸಫ್ವಾನ್ ಗೂ ಸುಹಾಸ್ ನಿಂದ ಕೊಲೆ ಆಗುವ ಆತಂಕ ಇತ್ತು, ಹಾಗಾಗಿ ಆದಿಲ್ ನ ಸಂಪರ್ಕ ಪಡೆದು ಕೊಲೆ ಮಾಡಲಾಗಿದೆ ಎಂದರು.
ಸುಹಾಸ್ ಶೆಟ್ಟಿ ಗೆ ಕೊಲೆಗೆ ಬುರ್ಖಾಧಾರಿ ಮಹಿಳೆ ಸಾಥ್ ಕುರಿತಂತೆ ಪ್ರಶ್ನೆಗೆ ಆ ಮಹಿಳೆ ಕೊಲೆ ಆರೋಪಿ ನಿಯಾಜ್ ನ ಸಂಬಂಧಿಕೆಯಾಗಿದ್ದು, ಯಾವುದೋ ಕೆಲಸಕ್ಕೆ ಆ ಹೆಂಗಸು ಅಲ್ಲಿ ಬಂದಿರೋದು ಹೇಳಿದ್ದು, ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ ಎಂದರು. ಈ ಕೊಲೆ ಆರೋಪಿಗಳು ಪಿಎಫ್ಐ ಕಾರ್ಯಕರ್ತ ರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ, ಅವರ ಸೋಷಿಯಲ್ ಮಿಡಿಯಾ ತಪಾಸಣೆ ಮಾಡುತ್ತಿದ್ದೇವೆ ಎಂದರು.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹಂತಕರ ಮಾಹಿತಿ
1)ಅಬ್ದುಲ್ ಸಫ್ವಾನ್ ( 29) ಹಾಲಿ ವಾಸ : ಇಸ್ಮಾಯಿಲ್ ಇಂಜಿನಿಯರ್ ಅವರ ಬಾಡಿಗೆ ಮನೆ ಮಹಾಕಾಳಿ ದೇವಸ್ಥಾನ ರಸ್ತೆ ಬಜಪೆ ಕಿನ್ನಿಪದವು ಮಂಗಳೂರು
ಕೆಲಸ : ಡ್ರೈವರ್
2) ನಿಯಾಜ್ (28) ವಾಸ : ಶಾಂತಿಗುಡ್ಡೆ ಮಸೀದಿ ಬಳಿ ಬಜ್ಪೆ ಮಂಗಳೂರು
ಮಹಾಕಾಳಿ ದೇವಸ್ಥಾನ ನ ಬಳಿ ಮಾವ ಖಲಂದರ್ ಕಿನ್ನಿಪದವು ಬಜ್ಪೆ
ಕೆಲಸ : ಮೇಸ್ತ್ರಿ ಹೆಲ್ಪರ್ ಕೆಲಸ
3) ಮೊಹಮ್ಮದ್ ಮುಝಮಿಲ್ (32)
ವಾಸ : 313 ಅಪಾರ್ಟ್ಮೆಂಟ್ ಫ್ಲಾಟ್ ನಂಬರ್ 605 ಏರ್ಪೋರ್ಟ್ ರಸ್ತೆ ಕೆಂಜಾರು ಬಜ್ಪೆ ಮಂಗಳೂರು.
ಕೆಲಸ : 4 ತಿಂಗಳ ಹಿಂದೆ ಸೌದಿ ಅರೇಬಿಯಾ ದಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿರುತ್ತಾನೆ. ಪ್ರಸ್ತುತ ಊರಿಗೆ ಬಂದು 04 ತಿಂಗಳ ಹಿಂದೆ ಮದುವೆಯಾಗಿರುತ್ತಾನೆ. ಈತನ ಮೇಲೆ ಪಣಂಬೂರು ಠಾಣಾ ಆ. ಕ್ರ 214/ 2016 ಕಲಂ 392 IPC ರಂತೆ ಪ್ರಕರಣ ದಾಖಲಾಗಿರುತ್ತದೆ.
4)ಕಲಂದರ್ ಶಾಫಿ (31) ವಾಸ : 1-163/1 ಕುರ್ಸು ಗುಡ್ಡೆ ಕಳವಾರು ಕಳವಾರು ಮಂಗಳೂರು
ಕೆಲಸ: ಸೇಲ್ಸ್ ಮ್ಯಾನ್ ಬೆಂಗಳೂರು, ಈತನ ಮೇಲೆ ಸುರತ್ಕಲ್ ಠಾಣಾ ಆ. ಕ್ರ 112/2023 ಕಲಂ 8(c) 20(b) ii (a) ndps act 1985 ರಂತೆ ಪ್ರಕರಣ ದಾಖಲಾಗಿರುತ್ತದೆ.
5) ರಂಜಿತ್ (19)
ವಾಸ: ರುದ್ರ ಪಾದ ಕಳಸ ತಾಲೂಕು ಚಿಕ್ಕಮಂಗಳೂರು ಜಿಲ್ಲೆ.
ಕೆಲಸ: ಡ್ರೈವಿಂಗ್ ಲಾಂಗ್ ಸ್ವಿಫ್ಟ್ ಕಾರ್ ನಿಂದ ತೆಗೆದು ಕೊಟ್ಟಿರುತ್ತಾನೆ.
6) ನಾಗರಾಜ್ (20)
ವಾಸ: ಕಳಸ ಕೋಟೆ ಹೊಳೆ ಮಾವಿನಕೆರೆ ಗ್ರಾಮ ಚಿಕ್ಕಮಂಗಳೂರು ಜಿಲ್ಲೆ
ಕೆಲಸ: ಶಾಮಿಯಾನ ಅಂಗಡಿಯಲ್ಲಿ ಕೆಲಸ
7) ಮೊಹಮ್ಮದ್ ರಿಜ್ವಾನ್ (28)
ವಾಸ: ಈದ್ಗ ಮಸೀದಿ ಹತ್ತಿರ ಬಿ. ಎಂ. ಟಿ ಫ್ಲಾಟ್ ನಂಬರ್ 203 ಜೋಕಟ್ಟೆ ಮಂಗಳೂರು.
ಕೆಲಸ: ಸೌದಿ ಅರೇಬಿಯಾ ಆಯಿಲ್ ಪ್ಲಾಂಟ್ ಶಟ್ ಡೌನ್
8) ಅದಿಲ್ ಮೆಹರೂಫ್