Connect with us

    LATEST NEWS

    ಕುಂದಾಪುರ ಲಾಡ್ಜ್ ನಲ್ಲಿ ವಿವಾಹಿತರ ಆತ್ಮಹತ್ಯೆ

    ಕುಂದಾಪುರ ಲಾಡ್ಜ್ ನಲ್ಲಿ ವಿವಾಹಿತರ ಆತ್ಮಹತ್ಯೆ

    ಉಡುಪಿ ಸೆಪ್ಟೆಂಬರ್ 30: ಕುಂದಾಪುರದ ಲಾಡ್ಜ್ ನಲ್ಲಿ ಮಹಿಳೆ ಹಾಗೂ ಪುರುಷ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಉಡುಪಿ ಜಿಲ್ಲೆ ಕುಂದಾಪುರದಲ್ಲಿರುವ ಹರಿಪ್ರಸಾದ್ ಲಾಡ್ಜಿನಲ್ಲಿ ಈ ಘಟನೆ ನಡೆದಿದೆ.

    ಮೃತರನ್ನು ಗುರುಮೂರ್ತಿ (43), ಶಾರದಾ (30) ಎಂದು ಗುರುತಿಸಲಾಗಿದೆ. ಇಬ್ಬರು ಶೃಂಗೇರಿ ಮೂಲದವರಾಗಿದ್ದು ಇಬ್ಬರೂ ಕೂಡ ವಿವಾಹಿತರು. ಮೃತ ಶಾರಾದಾ ತನ್ನ ಪತಿ, ಪುತ್ರಿಯನ್ನು ಬಿಟ್ಟು ಬಂದಿದ್ದಳು ಎಂದು ಹೇಳಲಾಗಿದ್ದು,ಗುರು ಮೂರ್ತಿ ಪತ್ನಿ, ಪುತ್ರಿಗೆ ಕೈಕೊಟ್ಟು ಬಂದಿದ್ದ. ಗುರುಮೂರ್ತಿ ಸಿಂದುವಳ್ಳಿ ಗ್ರಾಮ‌ನಿವಾಸಿಯಾಗಿದ್ದು, ಶಾರದಾ ನೇತ್ರವಳ್ಳಿ ಗ್ರಾಮ‌ ನಿವಾಸಿಯಾಗಿದ್ದಾರೆ.

    ಇಬ್ಬರೂ ಲಾಡ್ಜ್ ನಲ್ಲಿ ನಾಲ್ಕು ದಿನಗಳಿಂದ ತಂಗಿದ್ದರು ಎಂದು ಹೇಳಲಾಗಿದ್ದು, ಇಂದು ಬಾಗಿಲು ತೆರೆದಾಗ ಇಬ್ಬರ ಶವ ಪತ್ತೆಯಾಗಿದೆ.
    ಇಬ್ಬರು ಮದ್ಯದ ಜೊತೆ ಕೀಟ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

    ಲಾಡ್ಜ್ ನಲ್ಲಿ ಶಾರದಾ ಬರೆದ ಡೆತ್ ನೋಟ್ ಲಭ್ಯವಾಗಿದ್ದು, ಅದರಲ್ಲಿ ತನ್ನ ಸಾವಿಗೆ ತನ್ನ ಪತಿಯೇ ಕಾರಣ ಎಂದು ಬರೆದಿದ್ದಾರೆ. ಕೊಠಡಿಯೊಳಗೆ ಖಾಲಿ ಮದ್ಯದ ಬಾಟಲಿ, ಕೀಟನಾಶಕ ಬಾಟಲಿ ದೊರೆತಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply