Connect with us

    LATEST NEWS

    ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ : ಮಂಗಳೂರು ಮೇಯರ್ ಹೇಳಿಕೆ ಹಾಸ್ಯಾಸ್ಪದ

    ಮಂಗಳೂರು  : ಮಂಗಳೂರು ನಗರದಲ್ಲಿ ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ  ಬಗ್ಗೆ  ಮೇಯರ್ ನೀಡಿದ ಹೇಳಿಕೆ ಹಾಸ್ಯಾಸ್ಪದ ಎಂದು ದಕ್ಷಿಣಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ ಹೇಳಿದೆ.

     

    ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಗೆ ಆದೇಶ ನೀಡುವ ಹಕ್ಕು ಮೇಯರ್ ಅವರಿಗಿಲ್ಲ ಮೇಯರ್ ಹೇಳಿಕೆ ಬೀದಿಬದಿ ವ್ಯಾಪಾರದ ನಿಯಮದ ಬಗ್ಗೆ ಅರವರಿಗಿರುವ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ ಎಂದು ದಕ್ಷಿಣಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿಕೆ ಇಮ್ತಿಯಾಜ್ ಮೇಯರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

    ದೂರದ ಇಂದೋರ್ ಪ್ರವಾಸದಲ್ಲಿದ್ದು ಬಡವರ ಹೊಟ್ಟೆಗೆ ಹೊಡೆದು ಮಂಗಳೂರಿಗೆ ಬಂದಿರುವುದಕ್ಕೆ ನಿಮಗೆ ಸ್ವಾಗತವಿದೆ .ನಿಮ್ಮನ್ನು ಬೀದಿಬದಿ ವ್ಯಾಪಾರಸ್ಥರ ಸಂಘದವರು ಇಂದೋರಿಗೆ ಬಂದು ಭೇಟಿ ಮಾಡಬೇಕಿತ್ತೆ ಭೇಟಿ ಮಾಡುವುದಿರಲಿ ಮೊದಲು ಸಾರ್ವಜನಿಕರ ಕರೆ ಸ್ವೀಕರಿಸಿ ಎಂದು ಅವರು ವ್ಯಂಗ್ಯವಾಡಿದ್ದಾರೆ.

    ಪ್ರಮಾಣಪತ್ರಕ್ಕೆ ಅಫಿಡವಿಟ್ ನೀಡಬೇಕಿರುವುದು ಹೌದು ಅದರಲ್ಲಿ ಹಾಕಿರುವ ಷರತ್ತುಗಳು ಬೀದಿ ವ್ಯಾಪಾರದ ಕಾನೂನಿಗೆ ವಿರುದ್ಧವಾದ ಅಂಶಗಳನ್ನು ಹೆಚ್ವುವರಿಯಾಗಿ ಸೇರ್ಪಡೆಗೊಳಿಸಿರುವ ಕಾರಣಕ್ಕಾಗಿ ನಾವು ಒಪ್ಪಲಿಲ್ಲ ಎಂದು ಬಿಕೆ ಇಮ್ತಿಯಾಜ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply