Connect with us

    LATEST NEWS

    ಎಂಎಲ್ಸಿ ಐವನ್ ಡಿಸೋಜಾ ಮನೆ ಮೇಲೆ ಕಲ್ಲು ಹೊಡೆದವರು ಅರೆಸ್ಟ್

    ಮಂಗಳೂರು ಅಗಸ್ಟ್ 28: ಎಂಎಲ್ಸಿ ಇವಾನ್ ಡಿಸೋಜಾ ಅವರ ನಿವಾಸದ ಮೇಲೆ ಇತ್ತೀಚೆಗೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.


    ಬಂಧಿತರನ್ನು ಬಂಟ್ವಾಳದ ಭರತ್ @ಯಕ್ಷಿತ್ (24) ಮತ್ತು ದಿನೇಶ್ ಕುರ್ತಮೋಗೇರು (20) ಎಂದು ಗುರುತಿಸಲಾಗಿದೆ. ಆರೋಪಿಗಳ ಮೇಲೆ ಹಳೆಯ ಪ್ರಕರಣಗಳು ಇದ್ದು, ಐವನ್ ಡಿಸೋಜಾ ನೀಡಿರುವ ಹೇಳಿಕೆಗಳಿಂದ ಸಿಟ್ಟುಗೊಂಡ ಅವರು ಐವನ್ ಡಿಸೋಜಾ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ.

     

    ಆರೋಪಿಗಳ ಬಂಧನಕ್ಕೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಅವರು ಸಿಸಿಟಿವಿ ದೃಶ್ಯಾವಳಿ , ವಾಹನಗಳ ಮಾಹಿತಿ ಹಾಗೂ ಸ್ಥಳೀಯರ ಮಾಹಿತಿಗಳನ್ನು ಕಲೆ ಹಾಕಿ ಆರೋಪಿಗಳನ್ನು ಅರೆಸ್ಟ್ ಮಾಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply