Connect with us

DAKSHINA KANNADA

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಹಿಳಾ ಭಕ್ತರ ಮೇಲೆ ತಲವಾರು ಬೀಸಿ ಬೆದರಿಸಿದ ದನಗಳ್ಳರು

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಹಿಳಾ ಭಕ್ತರ ಮೇಲೆ ತಲವಾರು ಬೀಸಿ ಬೆದರಿಸಿದ ದನಗಳ್ಳರು

ಸುಳ್ಯ ಫೆಬ್ರವರಿ 22: ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದನಕಳ್ಳರ ಹಾವಳಿ ಹೆಚ್ಚಾಗಿದ್ದು,  ದನಕಳ್ಳತನವನ್ನು ಪ್ರಶ್ನಿಸಿದ ಮಹಿಳಾ ಭಕ್ತರ ಮೇಲೆ ದನಕಳ್ಳರು ತಲವಾರು ಬೀಸಿ ಬೆದರಿಸಿದ ಘಟನೆ ನಡೆದಿದೆ.

ದೇಶದ ಹೆಸರಾಂತ ನಾಗ ಕ್ಷೇತ್ರದಲ್ಲೂ ಕೂಡ ದನಕಳ್ಳರ ಹಾವಳಿ ಹೆಚ್ಚಾಗಿದೆ. ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದ ಐವರು ದುಷ್ಕರ್ಮಿಗಳ ತಂಡ ಕುಕ್ಕೆ ಸುಬ್ರಹ್ಮಣ್ಯ ಪರಿಸರದ ದನಗಳನ್ನು ಕಾರಿನಲ್ಲಿ ತುಂಬಿಕೊಂಡು ಸಾಗಿಸಿದ್ದಾರೆ. ಈ ಕಳ್ಳತನವನ್ನು ಪ್ರಶ್ನಿಸಿದ ಮಹಿಳಾ ಭಕ್ತರನ್ನು ಈ ದುಷ್ಕರ್ಮಿಗಳು ತಲವಾರು ಬಿಸಿ ಬೆದರಿಸಿದ್ದಾರೆ.

ಮಹಿಳಾ ಭಕ್ತರಿಂದ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪುಣ್ಯಕ್ಷೇತ್ರ ದಲ್ಲೂ ಇಂಥ ಘಟನೆ ನಡೆದರೆ ಮಹಿಳೆಯರು ಕ್ಷೇತ್ರಕ್ಕೆ ಬರುವುದಾದರೂ ಹೇಗೆ ಎಂದು ದೂರಿನಲ್ಲಿ ಮಹಿಳಾ ಭಕ್ತರ ಆತಂಕ ವ್ಯಕ್ತಪಡಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *