UDUPI
ಉಡುಪಿ ನಗರಸಭೆ ಪೌರಾಯುಕ್ತ ಮಂಜುನಾಥಯ್ಯ ಅಣಕು ಶವಯಾತ್ರೆ
ಉಡುಪಿ ನಗರಸಭೆ ಪೌರಾಯುಕ್ತ ಮಂಜುನಾಥಯ್ಯ ಅಣಕು ಶವಯಾತ್ರೆ
ಉಡುಪಿ ಅಕ್ಟೋಬರ್ 6:- ಉಡುಪಿ ನಗರಸಭೆಯಲ್ಲಿ ಮಿತಿ ಮೀರಿದ ಭ್ರಷ್ಟಾಚಾರ ನಡೆಯತ್ತಿದ್ದು , ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿರುವ ಪೌರಾಯುಕ್ತ ಮಂಜುನಾಥಯ್ಯ ಅವರನ್ನು ಈ ಕೂಡಲೇ ವರ್ಗಾಯಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಂತರ ಪೌರಾಯುಕ್ತ ಮಂಜುನಾಥಯ್ಯ ಅವರ ಶವಯಾತ್ರೆ ನಡೆಸಿದ ಬಿಜೆಪಿ ಕಾರ್ಯಕರ್ತರು ಉಡುಪಿ ನಗರಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ನಗರಸಭೆ ಆಯುಕ್ತರ ಲಂಚಾವತಾರಕ್ಕೆ ಜನರು ಬೇಸತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು , ಶಿಕ್ಷಣ ಇಲಾಖೆಯ ಬಿ.ಒ ಆಗಿದ್ದ ಮಂಜುನಾಥಯ್ಯ ಅವರನ್ನು ಈ ಕೂಡಲೇ ವರ್ಗಾಯಿಸಬೇಕೆಂದು ಒತ್ತಾಯಿಸಿದರು.
ಕಳೆದ 10ವರ್ಷಕ್ಕೂ ಅಧಿಕ ಕಾಲ ಉಡುಪಿಯಲ್ಲೇ ಸರ್ಕಾರಿ ಅಧಿಕಾರಿಯಾಗಿರುವ ಮಂಜುನಾಥಯ್ಯ ಇದ್ದು , ರಾಜಕೀಯ ಪ್ರಭಾವ ಬಳಸಿ ಅಧಿಕಾರ ಗಿಟ್ಟಿಸಿ ಪೌರಾಯುಕ್ತರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
Facebook Comments
You may like
ಕಲಿತ ಶಾಲೆ ಮುಚ್ಚಬಾರದೆಂದು ಪ್ರಧಾನಿಗೆ ಪತ್ರ ಬರೆದ ಬಾಲಕಿ…!
ಈಜಲು ತೆರಳಿದ ಇಬ್ಬರು ನೀರಿನಲ್ಲಿ ಮುಳುಗಿ ಸಾವು
ಉಡುಪಿ ಕ್ಷೇತ್ರ ವ್ಯಾಪ್ತಿಯಲ್ಲಿ 88 ಕೋಟಿ ರೂಪಾಯಿಗಳ ಸೇತುವೆ ನಿರ್ಮಾಣ- ಪ್ರಮೋದ್
‘ಮಹಾತ್ಮರ ಸ್ಮರಣೆಯಿಂದ ಉತ್ತಮ ಸಮಾಜ’: ನಳಿನ್ ಪ್ರದೀಪ್ ರಾವ್
ಜ.30ರಿಂದ ಕುಷ್ಠ ಅರಿವು ಆಂದೋಲನ :ಶಿವಾನಂದ ಕಾಪಶಿ
ಸರ್ಕಾರ ನೀಡುವ ಸೌಲಭ್ಯಗಳ ಸದುಪಯೋಗ ಅಗತ್ಯ : ಪ್ರಮೋದ್ ಮಧ್ವರಾಜ್
You must be logged in to post a comment Login