UDUPI
ಗಣಿತ ಪರೀಕ್ಷೆ ದಿನ ವಿಧ್ಯಾರ್ಥಿಗಳೊಂದಿಗೆ ಧರ್ಮಗುರುಗಳ ಪ್ರಾರ್ಥನೆ
ಉಡುಪಿ ಜೂನ್ 27: ಎಸ್ ಎಸ್ ಎಲ್ ಸಿ ಪರೀಕ್ಷೆಯ ಸರಣಿಯಲ್ಲಿ ಇಂದು ಗಣಿತ ಪರೀಕ್ಷೆ ನಡೆದಿದೆ. ಗಣಿತ ಅಂದ್ರೆ ಕಬ್ಬಿಣದ ಕಡಲೆ ಅನ್ನೋ ಮಾತಿದೆ. ಅದ್ರಲ್ಲೂ ಲಾಕ್ ಡೌನ್, ಕೊರೋನಾ ನಡುವೆ ಈ ಬಾರಿ ಮಕ್ಕಳು ಕೂಡಾ ಹೈರಾಣಾಗಿ ಹೋಗಿದ್ದಾರೆ. ಈ ನಡುವೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸೈಂಟ್ ಅಂಥೋನಿ ಇಂಗ್ಲೀಷ್ ಮೀಡಿಯಂ ಪರೀಕ್ಷೆಗೆ ಹೊರಟ ಮಕ್ಕಳಿಗೆ ಧೈರ್ಯ ಮತ್ತು ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡಿದೆ.
ಧರ್ಮ ಗುರುಗಳು ವಿದ್ಯಾರ್ಥಿಗಳನ್ನು ನಿಲ್ಲಿಸಿ ಪ್ರಾರ್ಥನೆ ಮಾಡಿಸಿದ್ದಾರೆ. ಸಾಮಾಜಿಕ ಅಂತರವಿಟ್ಟು ಶಾಲಾ ಮೈದಾನದಲ್ಲಿ ಮಕ್ಕಳನ್ನು ನಿಲ್ಲಿಸಿ ಭಯವಿಲ್ಲದೆ ಪರೀಕ್ಷೆ ಬರೆಯಿರಿ, ಯಾವುದೇ ಆತಂಕ ಬೇಡ ದೇವರ ಕೃಪೆಯಿರಲಿ.. ಓದಿದೆಲ್ಲ ನೆನಪಿಗೆ ಬರಲಿ ಎಂದು ಧರ್ಮಗುರುಗಳು ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಹಾರೈಸಿ ಭಗವಂತನಲ್ಲಿ ಪ್ರಾರ್ಥನೆ ಮಾಡಿದರು. ಪ್ರಾರ್ಥನಾ ವಿಧಿ ನಂತರ ಮಕ್ಕಳು ಆಯಾಯ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಬರೆದಿದ್ದಾರೆ.
Facebook Comments
You may like
ನ್ಯಾಯಾಂಗದಲ್ಲಿ ಕಲ್ಲರಳಿ ಹೂವಾದ ಧರ್ಮಸ್ಥಳದ ಕುಮಾರಿ ಚೇತನಾ..!
ತಮಿಳು ನಟ ಸೂರ್ಯ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಹೈಕೋರ್ಟ್ ಜಡ್ಜ್ ಪತ್ರ
ಪಿಯು ಬೋರ್ಡ್ ಬೇಜಾವಾಬ್ದಾರಿ ಸಂಕಷ್ಟಕ್ಕೆ ಸಿಲುಕಿದ ಬಡ ವಿದ್ಯಾರ್ಥಿನಿ
ಬಿಎಸ್ ಸಿ ಅಗ್ರಿಕಲ್ಚರ್ ನಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಕಾಲೇಜಿನ ವರುಣ್ ಗೌಡ ಪ್ರಥಮ
625ಕ್ಕೆ 625 ಅಂಕ ಪಡೆದ ಸುಬ್ರಹ್ಮಣ್ಯ ಕುಮಾರಸ್ವಾಮಿ ಪ್ರೌಢಶಾಲೆಯ ವಿದ್ಯಾರ್ಥಿ ಅನುಷ್ ಎ ಎಲ್
ಸಾಲಿಗ್ರಾಮ: 10ನೇ ತರಗತಿ ವಿಧ್ಯಾರ್ಥಿ ಆತ್ಮಹತ್ಯೆ
You must be logged in to post a comment Login