Connect with us

BELTHANGADI

ಬಿಜೆಪಿ ನಾಯಕರಿಗೆ ಶಾಕ್ ನೀಡಿದ ಸೌಜನ್ಯ ತಾಯಿ- ನನ್ನ ಮಗಳ ಸಾವಿಗೆ ನ್ಯಾಯ ಒದಗಿಸಲು ಸಂಸದರು ಈವರೆಗೆ ಧ್ವನಿಯೆತ್ತಿಲ್ಲ

ಬೆಳ್ತಂಗಡಿ, ಆಗಸ್ಟ್ 27: ಅತ್ಯಾಚಾರ ಮಾಡಿ ಕೊಲೆಯಾಗಿದ್ದ ಸೌಜನ್ಯಪರವಾಗಿ ನಡೆಯುತ್ತಿರುವ ಹೋರಾಟಕ್ಕೆ ಕೈಜೋಡಿಸಲು ಹೋದ ಬಿಜೆಪಿ ನಾಯಕರಿಗೆ ಸೌಜನ್ಯ ತಾಯಿ ಶಾಕ್ ನೀಡಿದ್ದಾರೆ. ಬಿಜೆಪಿಯ ಪ್ರತಿಭಟನಾ ಸಭೆಯಲ್ಲಿ ಧೈರ್ಯದಿಂದ ಮಾತನಾಡಿದ ಸೌಜನ್ಯ ತಾಯಿ ನ್ಯಾಯಕ್ಕಾಗಿ ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭೆ ಸ್ಥಾನದಿಂದ ಕೆಳಗಿಳಿಸಿ. ಜೊತೆಗೆ ನನ್ನನ್ನು ಪ್ರಧಾನಿ ಮೋದಿಯ ಬಳಿಗೆ ಕರೆದುಕೊಂಡು ಹೋಗಿ ಎಂದು ಸವಾಲು ಹಾಕಿದ್ದಾರೆ.

ಸೌಜನ್ಯಾ ಪರವಾಗಿ ಬೆಳ್ತಂಗಡಿಯಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಬಿಜೆಪಿಯ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಶಾಸಕರು ಭಾಗಿಯಾಗಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್ ಕೂಡ ಸಭೆಯಲ್ಲಿದ್ದು, ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಕುಸುಮಾವತಿ, ನೀವೆಲ್ಲ ಇವತ್ತು ಸೌಜನ್ಯಾ ಫೋಟೋ ಜೊತೆಗೆ ಭಿತ್ತಿಪತ್ರ ಹಿಡಿದಿದ್ದೀರಿ. ಮೊನ್ನೆ ನಡೆದ ಪ್ರತಿಭಟನೆಯಲ್ಲಿ ಸೌಜನ್ಯಾ ಫೋಟೋ ಇರಲಿಲ್ಲ. ನ್ಯಾಯಕ್ಕಾಗಿ ಪ್ರತಿಭಟನೆ ಎಂದಷ್ಟೇ ಆಗ್ರಹ ಇತ್ತು. ಇದಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತೇನೆ. ಜೊತೆಗೆ ನನ್ನ 17 ವರ್ಷದ ಮಗಳನ್ನು ಯಾರು ಚುಚ್ಚಿ ಕೊಂದು ಹಾಕಿದ್ದಾರೆಂದು ಗೊತ್ತಿದೆ.


ನಿಮ್ಮಲ್ಲಿ ಒಂದೇ ಬೇಡಿಕೆ ಇಟ್ಟಿರೋದು. ನನಗೆ ನ್ಯಾಯ ದೊರಕಿಸಿಕೊಡಿ. 12 ವರ್ಷಗಳಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ಇಲ್ಲಿನ ಸಂಸದರು ನಮ್ಮ ಪರವಾಗಿ ಧ್ವನಿ ಎತ್ತಿಲ್ಲ. ಇವತ್ತು ಪ್ರತಿಭಟನೆಗೆ ಬಂದಿದ್ದಾರೆ. ಎರಡು ಜಿಲ್ಲೆಯ ಶಾಸಕರು ಕೂಡ ಕೈಜೋಡಿಸಿದ್ದಾರೆ. ಎಲ್ಲರಲ್ಲಿಯೂ ಕೈಮುಗಿದು ಕೇಳುತ್ತಿದ್ದೇನೆ. ನೀವು ನನ್ನ ಮಗಳನ್ನು ಅತ್ಯಾಚಾರ ಮಾಡಿ ಕೊಂದು ಹಾಕಿದವರಿಗೆ ಶಿಕ್ಷೆ ಕೊಡಿಸಿ ಎಂದು ಆಗ್ರಹ ಮಾಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *