BELTHANGADI
ಬೆಳ್ತಂಗಡಿಗೆ ಬಂದ ಯೋಧ ಸಂದೇಶ್ ಶೆಟ್ಟಿ ಪಾರ್ಥಿವ ಶರೀರ….!!
ಬೆಳ್ತಂಗಡಿ: ಉತ್ತರ ಪ್ರದೇಶದ ಮಥುರಾದಲ್ಲಿ ಕರ್ತವ್ಯದಲ್ಲಿದ್ದಾಗ ಸಾವನ್ನಪ್ಪಿದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಯೋಧ ಸಂದೇಶ್ ಶೆಟ್ಟಿ ಅವರು ಪಾರ್ಥಿವ ಶರೀರ ಇಂದು ಸಂಜೆ ಸ್ವ ಗ್ರಾಮ ಬಾರ್ಯಕ್ಕೆ ತರಲಾಯಿತು. ಇತ್ತೀಚೆಗಷ್ಟೇ ರಜೆಯಿಂದ ಹಿಂದಿರುಗಿದ ನಂತರ ಕಳೆದ ಸೋಮವಾರ ಅವರು ಪುನಃ ಕರ್ತವ್ಯಕ್ಕೆ ಹಾಜರಾಗಿದ್ದು ಮಥುರಾದಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿ ಅವರನ್ನು ಯೋಜಿಸಲಾಗಿತ್ತು. ಆದರೆ ಅಲ್ಲಿಯೇ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು.
ಇಂದು ಯೋಧ ಸಂದೇಶ್ ಶೆಟ್ಟಿಯವರ ಪ್ರಾರ್ಥಿವ ಶರೀರ ಸ್ವಗ್ರಾಮ ಬಾರ್ಯಕ್ಕೆ ತರಲಾಯಿತು. ಯೋಧ ಸಂದೇಶ್ ಶೆಟ್ಟಿಯವರ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಹಾಗೂ ಸೈನ್ಯ ಗೌರವಗಳನ್ನು ಸಲ್ಲಿಸಲಾಯಿತು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಸ್ಥಳೀಯಾಡಳಿತದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಬಾರ್ಯಾದ ನಿವಾಸಿಯಾಗಿರುವ ಸಂದೇಶ್ ಶೆಟ್ಟಿ ಕಳೆದ 14 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು.
You must be logged in to post a comment Login