BELTHANGADI
ಬೆಳ್ತಂಗಡಿ – ತೋಟದ ಕೆರೆಗೆ ಬಿದ್ದು ಸಾವನಪ್ಪಿದ ಪುಟ್ಟಮಗು ರೇಯನ್ ಡಿಸೋಜ
ಬೆಳ್ತಂಗಡಿ, ಜನವರಿ 22: ಮನೆಯ ಸಮೀಪ ಇರುವ ತೋಟದ ಕೆರೆಗೆ ಬಿದ್ದು ಪುಟ್ಟ ಮಗುವೊಂದು ಸಾವನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕನ್ನಾಜೆ ಎಂಬಲ್ಲಿ ಸೋಮವಾರ ನಡೆದಿದೆ. ನಡ ಗ್ರಾಮದ ಕನ್ನಾಜೆ ನಿವಾಸಿ ರೋಷನ್ ಡಿಸೋಜ ಮತ್ತು ಉಷಾ ಡಿಸೋಜ ದಂಪತಿಯ ಪುತ್ರ ಒಂದು ವರ್ಷ 11 ತಿಂಗಳ ರೇಯನ್ ಡಿಸೋಜ ಮೃತ ಮಗು.
ಮನೆಯಲ್ಲಿ ಆಟವಾಡುತ್ತಿದ್ದ ಮಗು ಮನೆ ಸಮೀಪದ ತೋಟಕ್ಕೆ ತೆರಳಿದ್ದು ಅಲ್ಲಿರುವ ಕೆರೆಗೆ ಬಿದ್ದಿದೆ. ಈ ವೇಳೆ ಮಗು ಕೆರೆಗೆ ಬಿದ್ದಿರುವುದನ್ನು ಗಮನಿಸಿದ ಮನೆಯವರು ತಕ್ಷಣ ಸ್ಥಳೀಯರ ಸಹಕಾರದಲ್ಲಿ ಮಗುವನ್ನು ಮೇಲೆತ್ತಿ ಲಾಯಿಲ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮಗು ಕೊನೆಯುಸಿರೆಳೆದಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login