Connect with us

LATEST NEWS

ಶಾರ್ಟ್ ಸರ್ಕ್ಯೂಟ್ ಕಾರು ಸಂಪೂರ್ಣ ಬಸ್ಮ

ಶಾರ್ಟ್ ಸರ್ಕ್ಯೂಟ್ ಕಾರು ಸಂಪೂರ್ಣ ಬಸ್ಮ

ಮಂಗಳೂರು ಜೂನ್ 2: ಶಾರ್ಟ್ ಸರ್ಕ್ಯೂಟ್ ಗೆ ಒಳಗಾದ ಕಾರೊಂದು ನಿಂತಿದ್ದ ಜಾಗದಲ್ಲಿಯೇ ಬೆಂಕಿ ಹತ್ತಿಕೊಂಡು ಧಗಧಗನೆ ಉರಿದು ಹೋದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ರಾತ್ರಿ 9.40ರ ಸುಮಾರಿಗೆ ಮಂಗಳೂರಿನ ಕಾವೂರಿನಲ್ಲಿ ಐ 20 ಹುಂಡೈ ಕಾರನ್ನು ನಿಲ್ಲಿಸಿ, ಅದರಲ್ಲಿದ್ದವರು ಅಲ್ಲಿಯೇ ಏನೋ ಖರೀದಿಗೆ ಹೋಗಿದ್ದರು. ಅಷ್ಟೊತ್ತಿಗೆ ಬೆಂಕಿ ಹೊತ್ತಿಕೊಂಡಿದ್ದು ಎಲ್ಲರೂ ನೋಡ ನೋಡುತ್ತಿದ್ದಂತೆ ಜ್ವಾಲೆ ಉಗುಳುತ್ತಾ ಉರಿಯತೊಡಗಿದೆ.

ಬಳಿಕ ಅಗ್ನಿಶಾಮಕ ದಳ, ಪೊಲೀಸರು ಸೇರಿ ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟೊತ್ತಿಗೆ ಕಾರು ಸಂಪೂರ್ಣ ಉರಿದು ಹೋಗಿತ್ತು. ಕಾರು ಬಜ್ಪೆ ನಿವಾಸಿ ಜಯರಾಜ್ ಎಂಬವರಿಗೆ ಸೇರಿದ್ದಾಗಿದ್ದು ಮಂಗಳೂರಿಗೆ ಆಗಮಿಸಿ ಹಿಂತಿರುಗಿ ಹೋಗುವ ಮಧ್ಯೆ ಘಟನೆ ನಡೆದಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *