LATEST NEWS
ಕರೋನಾ ಹಿನ್ನಲೆ ಜಿಲ್ಲೆಯ ಬೃಹತ್ ಶೋರೂಮ್ ಹೋಟೆಲ್ ರೆಸ್ಟೋರೆಂಟ್ ಬಂದ್
ಕರೋನಾ ಹಿನ್ನಲೆ ಜಿಲ್ಲೆಯ ಬೃಹತ್ ಶೋರೂಮ್ ಹೋಟೆಲ್ ರೆಸ್ಟೋರೆಂಟ್ ಬಂದ್
ಮಂಗಳೂರು ಮಾರ್ಚ್ 21: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈ ನಿಟ್ಟನಲ್ಲಿ ರಾಜ್ಯದ ಎಲ್ಲಾ ಹೋಟೆಲ್, ಬಾರ್ ಹಾಗೂ ಮಳಿಗೆಗಳನ್ನು ಮಾರ್ಚ್ 31 ರ ವರಗೆ ಮುಚ್ಚಲು ಆದೇಶ ನೀಡಿದ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಹೋಟೆಲ್,ಬಾರ್ ಹಾಗೂ ಶಾಪಿಂಗ್ ಮಳಿಗೆಗಳು ಇಂದು ಮಧ್ಯಾಹ್ನದಿಂದಲೇ ಬಂದ್ ಮಾಡಲಾಗಿದೆ.
ನಾಳೆ ಪ್ರಧಾನಿ ಮೋದಿ ದೇಶದ ಜನತೆಯಲ್ಲಿ ಸ್ವಯಂಪ್ರೇರಿತ ಜನತಾ ಕರ್ಫೂ ಹೇರುವಂತೆ ಮನವಿ ಮಾಡಿದ ಹಿನ್ನಲೆಯಲ್ಲಿ ಪುತ್ತೂರು, ಸುಳ್ಯ,ಬೆಳ್ತಂಗಡಿ, ಬಂಟ್ವಾಳ ಭಾಗದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಲಿವೆ. ಬಂದ್ ಹಿನ್ನಲೆಯಲ್ಲಿ ಅಗತ್ಯದ ವಸ್ತುಗಳಿಗಾಗಿ ಜನ ಇದೀಗ ಅಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ.
You must be logged in to post a comment Login