Connect with us

DAKSHINA KANNADA

ಪುತ್ತೂರಿನಲ್ಲಿ ಮಹಿಳೆ ಮೇಲೆ ನಾಡಕೋವಿಯಿಂದ ಶೂಟೌಟ್

ಪುತ್ತೂರು, ನವೆಂಬರ್ 22: ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದು ವ್ಯಕ್ತಿಯೋರ್ವರು ಮಹಿಳೆಗೆ ನಾಡಕೋವಿಯಿಂದ ಶೂಟ್ ಮಾಡಿದ ಪ್ರಕರಣ ಪುತ್ತೂರು ತಾಲೂಕಿನ ನರಿಮೊಗ್ರು ಗ್ರಾಮದ ವೀರಮಂಗಲ ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ.

ಕೋವಿಯ ಗುರಿ ತಪ್ಪಿದ ಕಾರಣ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ವೀರಮಂಗಲದ ನಿವಾಸಿ ದೇವಪ್ಪ ಎಂಬಾತ ತಮ್ಮ ಪಕ್ಕದ ಮನೆಯ ಧರ್ಣಮ್ಮ ಎಂಬವರಿಗೆ ನಾಡ ಕೋವಿಯಿಂದ ಶೂಟ್ ಮಾಡಿದ್ದು, ಕೋವಿಯಿಂದ ಮದ್ದು ಗುಂಡು ಹಾರಿದಾಗ ಗುರಿ ತಪ್ಪಿದ ಹಿನ್ನೆಲೆ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ತೆರಳಿದ ಪುತ್ತೂರು ಡಿವೈಎಸ್ಪಿ ಗಾನ ಕುಮಾರ್ ಮತ್ತು ಪೊಲೀಸ್ ತಂಡ ವಿಚಾರಣೆ ನಡೆಸುತ್ತಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *