Connect with us

    LATEST NEWS

    ಇಡೀ ರಾಮಭಕ್ತರಿಗೆ ಕರೆ ನೀಡುತ್ತೇವೆ….ರಾಜ್ಯದಲ್ಲಿ ಹನುಮ ಧ್ವಜ ಅಭಿಯಾನ ಮಾಡುತ್ತೇವೆ -ವಿಎಚ್ ಪಿ

    ಮಂಗಳೂರು ಜನವರಿ 29: ರಾಜ್ಯ ಸರಕಾರ ಮುಸ್ಲಿಂರ ಓಲೈಕೆಗಾಗಿ ಹನುಮ ಧ್ವಜವನ್ನು ತೆಗೆದಿದ್ದು, ಹನುಮ ಧ್ವಜ ಕೆಳಗಿಳಿಸಿದ ರೀತಿ ಮತ್ತೆ ಹನುಮ ಧ್ವಜ ಹಾರಿಸಬೇಕು. ಇಲ್ಲದಿದ್ದರೆ ಇಡೀ ರಾಮಭಕ್ತರಿಗೆ ಕರೆ ನೀಡುತ್ತೇವೆ. ರಾಜ್ಯದಲ್ಲಿ ಹನುಮ ಧ್ವಜ ಅಭಿಯಾನ ಮಾಡುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ​ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೇಲ್ ತಿಳಿಸಿದ್ದಾರೆ.


    ಮಂಗಳೂರಿನಲ್ಲಿ ಮಾತನಾಡಿದ ಅವರು ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಊರಿನ ರಾಮಭಕ್ತರು ಒಟ್ಟಾಗಿ ಸೇರಿ ಹನುಮ ಧ್ವಜ ಹಾರಿಸಿದ್ದಾರೆ. ಆದರೆ ಸರಕಾರ ಮುಸ್ಲಿಂ ಓಲೈಕೆಗೆ ಹನುಮಧ್ವಜ ತೆಗೆಸಿದೆ. ಈ ಮೂಲಕ ರಾಮ-ಹನುಮ ಭಕ್ತರ ಮನಸ್ಸಿಗೆ ನೋವಾಗಿದೆ. ರಾಷ್ಟ್ರ ಧ್ವಜ ಹಾರಿಸಲು ನಮ್ಮ ವಿರೋಧವಿಲ್ಲ. ಆದರೆ ಅದನ್ನು ಹಾರಿಸಲು ಅದರದ್ದೇ ಆದ ನೀತಿ ನಿಯಮಗಳಿವೆ. ರಾಷ್ಟ್ರ ಧ್ವಜಕ್ಕೂ ಅವಮಾನ ಮಾಡಿದ್ದಾರೆ. ಈ ರೀತಿ ಮಾಡಿದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

    ರಾಜ್ಯದಲ್ಲಿ ಹನುಮ ಧ್ವಜ ಅಭಿಯಾನ ಮಾಡುತ್ತೇವೆ. ರಸ್ತೆ, ಮನೆ ಮನೆಯಲ್ಲಿ ಹನುಮ ಧ್ವಜ ಹಾರಿಸಿ ನಾವು ಈ ಮೂಲಕ ಹನುಮ ಭಕ್ತಿಯನ್ನು ಸರ್ಕಾರಕ್ಕೆ ತೋರಿಸುತ್ತೇವೆ ಎಂದರು

    Share Information
    Advertisement
    Click to comment

    You must be logged in to post a comment Login

    Leave a Reply