Connect with us

LATEST NEWS

ವೆಂಕಟರಮಣ ಶಾರದಾ ಮಹೋತ್ಸವಕ್ಕೆ ತೆರೆ

ವೆಂಕಟರಮಣ ಶಾರದಾ ಮಹೋತ್ಸವಕ್ಕೆ ತೆರೆ

ಮಂಗಳೂರು ಅಕ್ಟೋಬರ್ 1 : ವೆಂಕಟರಮಣ ದೇವಸ್ಥಾನದ 95ನೇ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವಕ್ಕೆ ತೆರೆ ಬಿದ್ದಿದೆ. ಇಂದು ಶಾರದಾ ಮಾತೆಯ ವಿಜೃಂಭಣೆಯ ಶೋಭಾಯಾತ್ರೆ ನಡೆಯಿತು. ಶಾರದಾ ಮಾತೆಯ ಪೂಜೆಯ ನಂತರ ಅಲಂಕೃತವಾದ ಮಂಟಪದಲ್ಲಿ ದೇವಿಯ ಮೂರ್ತಿಯ ಶೋಭಾಯತ್ರೆ ನಡೆಯಿತು.

ಈ ಶೋಭಾಯಾತ್ರೆಯಲ್ಲಿ 10ಕ್ಕೂ ಅಧಿಕ ಟ್ಯಾಬ್ಲೋಗಳು ಹಾಗೂ ಹುಲಿ ವೇಷಧಾರಿಗಳು ಪಾಲ್ಗೊಂಡಿದ್ದವು. ದೇವಿಯ ಮೂರ್ತಿಯ ಶೋಭಾಯಾತ್ರೆ ಮೆರವಣಿಗೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು. ನಂತರ ದೇವಿಯ ಮೂರ್ತಿಯನ್ನು ಮಹಮ್ಮಾಯಿ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.

Video

Share Information
Continue Reading
Advertisement
Click to comment

Leave a Reply

Your email address will not be published. Required fields are marked *