Connect with us

DAKSHINA KANNADA

ಆಹಾರ ಸಚಿವ ಖಾದರ್ ಕ್ಷೇತ್ರಕ್ಕಿಲ್ಲ ಪಡಿತರ ಭಾಗ್ಯ

ಮಂಗಳೂರು,ಸೆಪ್ಟಂಬರ್ 22: ಆಹಾರ ಸಚಿವ ಯು.ಟಿ.ಖಾದರ್ ಸ್ವ ಕ್ಷೇತ್ರವಾದ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಒಂದು ವಾರದಿಂದ ಪಡಿತರ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ ತಲೆದೋರಿದೆ. ಪಡಿತರಕ್ಕಾಗಿ ಕಳೆದ ಒಂದು ವಾರದಿಂದ ಜನ ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿದಿನ ಹೋದರೂ, ಸರ್ವರ್ ಪ್ರಾಬ್ಲಮ್ ಎಂದು ಅಂಗಡಿಯವರ ಸಿದ್ಧ ಉತ್ತರ ದೊರೆಯುತ್ತಿದೆ. ಈ ಅವ್ಯವಸ್ಥೆಯ ವಿರುದ್ಧ ಇಂದು ಬಿಜೆಪಿ ಪಕ್ಷದ ಉಳ್ಳಾಲ ಘಟಕ ತೊಕ್ಕೋಟಿನಲ್ಲಿರುವ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಜನರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿದರು. ಅಲ್ಲದೆ ಕೂಡಲೇ ಈ ಸಮಸ್ಯೆಯನ್ನು ಸರಿಪಡಿಸುವಂತೆ ಆಹಾರ ಪೂರೈಕೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೂ ತೆಗೆದುಕೊಂಡರು. ಉಳ್ಳಾಲ ಸುತ್ತಮುತ್ತಲೇ ತಿರುಗಾಡುತ್ತಿರುವ ಸಚಿವರಿಗೆ ತಮ್ಮ ಕ್ಷೇತ್ರದಲ್ಲಿ ಜನರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಕಾಳಜಿಯಿಲ್ಲ ಎಂದು ಬಿಜೆಪಿ ನಾಯಕರು ಇದೇ ಸಂದರ್ಭದಲ್ಲಿ ದೂರಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *