LATEST NEWS
ಅಬ್ದುಲ್ ರಹಿಮಾನ್ ಹತ್ಯೆಯ ಸೂತ್ರಧಾರ ಭರತ್ ಕುಮ್ಡೇಲ್ ನನ್ನು 24 ಗಂಟೆಯ ಒಳಗಡೆ ಬಂಧಿಸದಿದ್ದರೆ SP ಕಛೇರಿ ಚಲೋ – ಮೂನಿಷ್ ಅಲಿ ಎಚ್ಚರಿಕೆ

ಮಂಗಳೂರು ಮೇ 29- ಪಿಕಪ್ ವಾಹನ ಚಾಲಕ ಅಮಾಯಕ ಯುವಕ ಅಬ್ದುಲ್ ರಹಿಮಾನ್ ಎಂಬಾತನನ್ನು ಸಂಘಪರಿವಾರದ ನಿರ್ದೇಶನದಂತೆ ಹತ್ಯೆ ನಡೆಸಿದ ಸೂತ್ರಧಾರನಾಗಿರುವ ಅಶ್ರಫ್ ಕಲಾಯಿ ಹಂತಕ ಭರತ್ ಕುಮ್ಡೇಲ್ನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ 24 ಗಂಟೆಯ ಒಳಗಡೆ ಬಂಧಿಸದಿದ್ದರೆ ಬೃಹತ್ ಜನಸಾಗರನ್ನು ಸೇರಿಸಿ SP ಕಛೇರಿ ಚಲೋ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲಾಧ್ಯಂತ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದೆಂದು ಎಸ್ಡಿಪಿಐ ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಹಾಗೂ ಬಂಟ್ವಾಳ ಪುರಸಭೆಯ ಉಪಾಧ್ಯಕ್ಷ ಮೂನಿಷ್ ಅಲಿ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಗ್ಯಾಂಗ್ ವಾರ್ ನಲ್ಲಿ ಹತ್ಯೆಯಾದ ಸುಹಾಸ್ ಶೆಟ್ಟಿಯ ಹತ್ಯೆಯ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಮುಸ್ಲಿಂ ಯುವಕರ ಹತ್ಯಾ ಯತ್ನ ನಡೆದಿತ್ತು. ಮಾತ್ರವಲ್ಲದೆ ಸಂಘಪರಿವಾರದ ನಾಯಕರಾದ ಭರತ್ ಕುಮ್ಡೇಲ್, ಶ್ರೀಕಾಂತ್ ಶೆಟ್ಟಿ, ಶಿವಾನಂದ ಮೆಂಡನ್ ಸೇರಿದಂತೆ ಹಲವು ಸಂಘಪರಿವಾರದ ನಾಯಕರು ಹತ್ಯೆಗೆ ಪ್ರತೀಕಾರ ನಡೆಸುತ್ತೇವೆ ಎಂದು ಬಹಿರಂಗವಾಗಿ ಉಗ್ರ ಭಾಷಣ ಬಿಗಿದು ಮುಸ್ಲಿಂ ಯುವಕರ ಹತ್ಯೆಯ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದರೂ ಪೋಲಿಸ್ ಇಲಾಖೆ ಹಾಗೂ ಸರ್ಕಾರ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಬಂಧಿಸಿ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ್ದರಿಂದ ಕೊಳ್ತಮಜಲುವಿನಲ್ಲಿ ಮುಸ್ಲಿಂ ಯುವಕನ ಹತ್ಯೆಯಾಗಿದೆ. ಇದಕ್ಕೆ ಅಶ್ರಫ್ ಕಲಾಯಿ ಹಂತಕ ಭರತ್ ಕುಮ್ಡೇಲ್ ನೇರ ಕೈವಾಡ ಇದೆ ಹಾಗೂ ಆತನೇ ಸೂತ್ರಧಾರನಾಗಿದ್ದಾನೆಂದು ಪೋಲಿಸ್ ಇಲಾಖೆಗೆ ತಿಳಿದಿದ್ದರೂ ಈತನಕ ಈ ನರ ಹಂತಕನ ಬಂಧನವಾಗಿಲ್ಲ. ನಾಳೆ ಸಂಜೆಯೊಳಗಾಗಿ ಈತನ ಬಂಧನವಾಗದಿದ್ದಲ್ಲಿ ಎಸ್ಪಿ ಕಛೇರಿ ಚಲೋ ಸೇರಿದಂತೆ ಜಿಲ್ಲಾಧ್ಯಂತ ತೀವ್ರ ಸ್ವರೂಪದ ಹೋರಾಟವನ್ನು ಎಸ್ಡಿಪಿಐ ನಡೆಸಲಿದೆ ಎಂದು ಮೂನಿಷ್ ಅಲಿ ಎಚ್ಚರಿಕೆ ನೀಡಿದ್ದಾರೆ.
