LATEST NEWS
ಕಾರ್ಕಳ ಕುಂಟಾಡಿ ಬೈಲಡ್ಕದ ಬಾಲಾಜಿ ಮಂದಿರದಲ್ಲಿ ಮೌನಿಯಾದ ಸಂತೋಷ್ ರಾವ್
ಉಡುಪಿ ಅಗಸ್ಟ್ 12 : ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಇದೀಗ ನಿರ್ದೋಷಿಯಾಗಿರುವ ಸಂತೋಷ್ ರಾವ್ ಅವರು ಕಾರ್ಕಳ ಕುಂಟಾಡಿ ಬೈಲಡ್ಕದ ಬಾಲಾಜಿ ಮಂದಿರದಲ್ಲಿ ಯಾರೊಂದಿಗು ಮಾತನಾಡದೆ ಮೌನಿಯಾಗಿ ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ಕಾರ್ಕಳ ಕುಂಟಾಡಿ ಬೈಲಡ್ಕದ ಬಾಲಾಜಿ ಮಂದಿರದಲ್ಲಿರುವ ಸಂತೋಷ್ ರಾವ್ ಮಂದಿರದಲ್ಲಿ ದೇವರ ಪೂಜಾ ಸಾಮಗ್ರಿಗಳನ್ನು ಸ್ವಚ್ಛಗೊಳಿಸುವುದು, ದೇಗುಲದ ವಠಾರ ಶುಚಿಗೊಳಿಸುವುದಲ್ಲಿ ತಲ್ಲೀನರಾಗಿರುತ್ತಾರೆ. ಬಿಡುವಿನ ವೇಳೆಯಲ್ಲಿ ಜಪ ಮಾಡುತ್ತಾರೆ. ಈ ಸೇವಾ ಕಾರ್ಯಗಳಿಗೆ ಪ್ರತಿಯಾಗಿ ಹಣ ಪಡೆಯುತ್ತಿಲ್ಲ’ ಎಂದು ಮಂದಿರದ ಗುರುಸ್ವಾಮಿ ಮಾಹಿತಿ ನೀಡಿದರು. ಸಂತೋಷ ರಾವ್ ಅನ್ನ ಸೇವಿಸುವುದಿಲ್ಲ. ದಿನಕ್ಕೆ ಎರಡು ಹೊತ್ತು ಬೇಕಾದ ಆಹಾರವನ್ನು ಸ್ವತಃ ಸಿದ್ಧಪಡಿಸಿಕೊಂಡು ಸೇವಿಸುತ್ತಾರೆ. ಚಹಾ, ಕಾಫಿ ಸೇವನೆ ಮಾಡುವುದಿಲ್ಲ ಎಂದು ಗುರುಸ್ವಾಮಿ ತಿಳಿಸಿದರು.
You must be logged in to post a comment Login