Connect with us

    DAKSHINA KANNADA

    ಸಂಘನಿಕೇತನದ 76ನೇ ವರ್ಷದ ಶ್ರೀ ಗಣೇಶೋತ್ಸವ – ಉಷೇ ಪೂಜೆಯೊಂದಿಗೆ ಸಾವಿರ ಹಣತೆಗಳ ಬೆಳಕಿನಲ್ಲಿ ಕಂಗೊಳಿಸಿದ ವಿಘ್ನ ನಿವಾರಕ..!

    ಸಂಘನಿಕೇತನದಲ್ಲಿ ಜರಗುತ್ತಿರುವ 76 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂದರ್ಭದಲ್ಲಿ ಇಂದು ಶ್ರೀ ದೇವರಿಗೆ ವಿಶೇಷ ‘ ಉಷೇ ಪೂಜೆ ‘ ಕಾರ್ಯಕ್ರಮ ಪ್ರಾತಃ ಕಾಲ ಬ್ರಾಹ್ಮೀ ಮುಹೂರ್ತದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು .

    ಮಂಗಳೂರು : ಸಂಘನಿಕೇತನದಲ್ಲಿ ಜರಗುತ್ತಿರುವ 76 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂದರ್ಭದಲ್ಲಿ ಇಂದು ಶ್ರೀ ದೇವರಿಗೆ ವಿಶೇಷ ‘ ಉಷೇ ಪೂಜೆ ‘ ಕಾರ್ಯಕ್ರಮ ಪ್ರಾತಃ ಕಾಲ ಬ್ರಾಹ್ಮೀ ಮುಹೂರ್ತದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು .

    ಪ್ರಾಃತಕಾಲದಲ್ಲಿ ಸಂಘನಿಕೇತನದ ಪ್ರಾಂಗಣವನ್ನು ಸಾವಿರಾರು ಹಣತೆಗಳೊಂದಿಗೆ ವಿಶೇಷವಾಗಿ ಅಲಂಕರಿಸಲಾಗಿತ್ತು.

    ಸಾವಿರಾರು ಭಕ್ತರು ಈ ಪವಿತ್ರ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ಗಣೇಶನ ಸಾನಿಧ್ಯವನ್ನು ಹಣತೆಗಳನ್ನು ಹಚ್ಚುವ ಮೂಲಕ ಅಲಂಕರಿಸಿದ್ದರು.

    ಬಳಿಕ ಸಂಘದ ಪ್ರಮುಖರು ಸ್ವಯಂ ಸೇವಕರು ಹಾಗೂ ಗಣೇಶೋತ್ಸವದ ಕಾರ್ಯಕರ್ತರಿಂದ ಶ್ರೀ ದೇವರ ಭಜನಾ ಸಂಕೀರ್ತನೆ ನಡೆಯಿತು..

     

     

     

    Share Information
    Advertisement
    Click to comment

    You must be logged in to post a comment Login

    Leave a Reply