Connect with us

DAKSHINA KANNADA

ಮಕ್ಕಳ ಕಳ್ಳನೆಂದು ಭಾವಿಸಿ ಮಗುವಿನ ಅಪ್ಪನಿಗೆ ಹೊಡೆದ ಸಾರ್ವಜನಿಕರು

ಮಕ್ಕಳ ಕಳ್ಳನೆಂದು ಭಾವಿಸಿ ಮಗುವಿನ ಅಪ್ಪನಿಗೆ ಹೊಡೆದ ಸಾರ್ವಜನಿಕರು

ಬೆಳ್ತಂಗಡಿ ಜುಲೈ 6: ಮಕ್ಕಳ ಕಳ್ಳನೆಂದು ಭಾವಿಸಿ ಮಗುವಿನ ಅಪ್ಪನಿಗೇ ಸಾರ್ವಜನಿಕರು ಸೇರಿ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿಯ ಉಜಿರೆ ಪೇಟೆಯಲ್ಲಿ ಘಟನೆ ನಡೆದಿದ್ದು, ಹೊಟೇಲಿನಲ್ಲಿ ಮಗುವಿನೊಂದಿಗೆ ವ್ಯಕ್ತಿಯೊಬ್ಬ ಚಹಾ ಕುಡಿಯುತ್ತಿದ್ದುದನ್ನು ಕಂಡು ಅನುಮಾನಗೊಂಡ ಸ್ಥಳೀಯರು ವಿಚಾರಣೆ ನಡೆಸಿದ್ದಾರೆ. ಅನುಮಾನಾಸ್ಪದ ಉತ್ತರ ನೀಡಿದ ಕಾರಣ, ಸಾರ್ವಜನಿಕರು ಆತನಿಗೆ ಥಳಿಸಿದ್ದಾರೆ.

ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಕೊನೆಗೆ ತನ್ನದೇ ಮಗುವೆಂದು ಹೇಳಿಕೊಂಡಿದ್ದಾನೆ. ಕೂಡಲೇ ಬೆಳ್ತಂಗಡಿ ಪೊಲೀಸರು ಆಗಮಿಸಿ ವಿಚಾರಿಸಿದ್ದು ಯುವಕ ಬೆಳ್ತಂಗಡಿಯ ಕಕ್ಕಿಂಜೆ ನಿವಾಸಿ ಖಲೀದ್ ಎನ್ನುವುದನ್ನು ಪತ್ತೆ ಮಾಡಿದ್ದಾರೆ. ಈತನಿಗೆ ಎರಡು ಮದುವೆಯಾಗಿದ್ದು ಬೇಲೂರು ಮೂಲದ ಯುವತಿಯನ್ನು ಎರಡನೇ ಬಾರಿ ಮದುವೆಯಾಗಿದ್ದ.

ಆಕೆಯ ಮಗುವನ್ನು ಆಟೋದಲ್ಲಿ ಕರ್ಕೊಂಡು ಬರುತ್ತಿದ್ದ ವೇಳೆ ಮಗುವಿಗೆ ಹೊಡೆದಿದ್ದನ್ನು ಬೈಕಿನಲ್ಲಿ ಬರುತ್ತಿದ್ದ ಯುವಕರು ಗಮನಿಸಿದ್ದರು. ಈ ಹಿನ್ನೆಲೆಯಲ್ಲಿ ಹೊಟೇಲಿನಲ್ಲಿದ್ದ ಖಲೀದ್ ನನ್ನು ವಿಚಾರಿಸಿದ್ದು ಆತ ಉತ್ತರಿಸಲು ತಡಬಡಾಯಿಸಿದ್ದರಿಂದ ಥಳಿಸಿದ್ದಾರೆ. ದಕ್ಷಿಣ ಕನ್ನಡ ಭಾಗದಲ್ಲಿ ಕೂಡ ಮಕ್ಕಳ ಕಳ್ಳರ ವದಂತಿ ಇರುವುದರಿಂದ ಇಂಥ ಘಟನೆ ನಡೆದಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *