Connect with us

BANTWAL

ಪೊಲೀಸ್ ಕಂಡು ಕಾರು ಬಿಟ್ಟು ಎಸ್ಕೇಪ್.. ಕಾರಿನಲ್ಲಿ ಕಂಡಿದ್ದು ಲಾಂಗು, ಮಚ್ಚು

ಕ್ರಿಮಿನಲ್ ಕೆಲಸಕ್ಕೆ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು….

ಬಂಟ್ವಾಳ: ಯಾವುದೋ ಕ್ರಿಮಿನಲ್ ಕೆಲಸಕ್ಕೆ ಹೊಂಚು ಹಾಕಿ ಕುಳಿತು ಕೊಂಡಿದ್ದ ಆರೋಪಿಗಳು ಪೋಲೀಸರನ್ನು ನೋಡಿದ ಕೂಡಲೇ ಪರಾರಿಯಾದ ಘಟನೆ ಬಂಟ್ವಾಳ ತಾಲೂಕಿನ ನಂದಾವರ ಎಂಬಲ್ಲಿ ನಡೆದಿದೆ.

ನಂದಾವರ ಶಾರದ ಹೈಸ್ಕೂಲ್ ನ ಬಳಿಯಲ್ಲಿ ನಂದಾವರ ನಿವಾಸಿ ಮುಸ್ತಫಾ ಮತ್ತು ಅವರ ಇಬ್ಬರು ಸ್ನೇಹಿತ ರು ಕಾರಿನಲ್ಲಿ ತಲವಾರು ಮತ್ತು ದೊಣ್ಣೆಯನ್ನು ಇಟ್ಟುಕೊಂಡು ಯಾವುದೋ ಕ್ರಿಮಿನಲ್ ಕೆಲಸಕ್ಕೆ ಸಂಚುರೂಪಿಸಿ ಕಾಯುತ್ತಿದ್ದರು.

ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಮತ್ತು ಅವರ ತಂಡ ರೌಂಡ್ಸ್ ನಲ್ಲಿ ನಂದಾವರ ಕಡೆಗೆ ತೆರಳುತ್ತಿದ್ಧ ವೇಳೆ ಮುಸ್ತಫಾ ಮತ್ತು ಅವರ ಸ್ನೇಹಿತ ರು ಎರಿಟಿಗಾ ಕಾರಿನ ಬಳಿಯಲ್ಲಿ ನಿಂತುಕೊಂಡಿದ್ದು ಪೋಲೀಸರನ್ನು ನೋಡಿ ಅಲ್ಲಿಂದ ಓಡಿಹೋದರು.

ಇವರು ಓಡಿ ಹೋದ ಹಿನ್ನಲೆಯಲ್ಲಿ ಸಂಶಯಗೊಂಡ ಅವಿನಾಶ್ ಇವರ ಕಾರನ್ನು ಪರಿಶೀಲನೆ ನಡೆಸಿ ದಾಗ ಕಾರಿನೊಳಗೆ ತಲವಾರು ಮತ್ತು ದೊಣ್ಣೆಗಳು ಕಂಡುಬಂದಿದೆ.
ಮುಸ್ತಫಾ ಮತ್ತು ಅವರ ತಂಡ ಯಾವುದೋ ಅಪರಾಧ ವೆಸಗಲು ಕಾರಿನಲ್ಲಿ ಸಂಚುರೂಪಿಸಿರಬಹುದು ಎಂಬ ಕಾರಣದಿಂದ ಪೋಲೀಸರು ಸುಮೋಟು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಮುಸ್ತಫಾ ಮತ್ತು ಅವರ ತಂಡದ ಪತ್ತೆಗೆ ಬಲೆಬೀಸಿದ್ದಾರೆ.

ನಂದಾವರ ವರದಲ್ಲಿ ಮುಸ್ತಫಾ ಮತ್ತು ಕಣ್ಣೂರುವಿನ ತಂಡದ ಜೊತೆ ಗಲಾಟೆ ನಡೆದಿದೆ ಎನ್ನಲಾಗಿದ್ದು ಈ ತಂಡದ ಮೇಲೆ ದಾಳಿ ಮಾಡುವ ಉದ್ದೇಶದಿಂದ ಸಂಚುರೂಪಿಸಿರಬಹುದು ಎಂಬ ಬಲವಾದ ಸಂಶಯ ಕೂಡಾ ಪೋಲೀಸರಿಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *