Connect with us

KARNATAKA

ಆ ಯಮ್ಮ ಕ್ಯಾನ್ಸರ್‌ ಇದ್ದಂಗೆ….ಎಲ್ಲರನ್ನೂ ಬುಟ್ಟಿಗೆ ಹಾಕಿಕೊಳ್ಳುತ್ತಾಳೆ – ಸಿಂಧೂರಿ ವಿರುದ್ದ ಕಿಡಿಕಾರಿದ ರೂಪಾ

ಬೆಂಗಳೂರು ಫೆಬ್ರವರಿ 22: ಸಾಮಾಜಿಕ ಜಾಲತಾಣದ ಫೋಸ್ಟ್ ಗಳಿಂದ ಗಲಾಟೆಯಲ್ಲಿದ್ದ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್‌ ಇದೀಗ ಆಡಿಯೋ ಹಂತಕ್ಕೆ ಹೋಗಿದ್ದು, ಇದೀಗ ಆರ್‌ಟಿಐ ಕಾರ್ಯಕರ್ತ ಎನ್.ಗಂಗರಾಜು ತಮ್ಮೊಂದಿಗೆ ರೂಪಾ ನಡೆಸಿದ ಸಂಭಾಷಣೆಯ ಆಡಿಯೊ ವೈರಲ್ ಆಗಿದೆ.


ಅದರಲ್ಲಿ ಸಿಂಧೂರಿ ಎನ್ನುವವಳು ಎಷ್ಟು ಮನೆ ಕೆಡಿಸಿದ್ದಾಳೆ, ಗಂಡನ ರಿಯಲ್‌ ಎಸ್ಟೇಟ್‌ ಬ್ಯುಸಿನೆಸ್‌ ಪ್ರಮೋಟ್ ಮಾಡೋಕೆ ಎಷ್ಟು ಭೂ ದಾಖಲಾತಿಗಳಿಗೆ ಸಂಬಂಧಿಸಿದಂತೆ ಇವರಿಂದ ಎಷ್ಟು ಮಾಹಿತಿ ಕಲೆಕ್ಟ್‌ ಮಾಡಿದ್ದಾಳೆ ಎನ್ನುವುದು ಗೊತ್ತಾಗಲಿ. ನೀವೂ ಸಹಕರಿಸಿದ್ದೀರಾ, ದುಡ್ಡು ಮಾಡ್ಕೊಂಡಿದ್ದೀರಿ ಎಂದು ನಾನೂ ಹೇಳುತ್ತೇನೆ.

‘ಆ ಯಮ್ಮನ ದೆಸೆಯಿಂದಾಗಿ ನಮ್ಮ ಕುಟುಂಬ ಚೆನ್ನಾಗಿಲ್ಲವಲ್ಲ ಈಗ?. ಆ ಯಮ್ಮ ಕ್ಯಾನ್ಸರ್‌ ಇದ್ದಂಗೆ. ಎಲ್ಲರನ್ನೂ ಬುಟ್ಟಿಗೆ ಹಾಕಿಕೊಳ್ಳುತ್ತಾಳೆ. ಡಿ.ಕೆ.ರವಿ ವಿಷಯದಲ್ಲಿ ಆಗಿದ್ದೂ ಹಾಗೆನೇ. ನಮ್ಮವರ ಹಿಂದೆಯೇ ಬಿದ್ದಿದ್ದಾಳೆ. ಲೋಕಾಯುಕ್ತ ಕೇಸ್ ರಿಪ್ಲೈನೂ ಇವರತ್ತಿರಾನೇ ಬರೆಸ್ಕೊಳ್ತಾಳೆ. ನಮ್ಮ ಮನೆಯವರು, ಮನೆಯವರಿಗೆ ಗಮನವನ್ನೇ ಕೊಡುತ್ತಿಲ್ಲ ಎಂದಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *