Connect with us

DAKSHINA KANNADA

ನಿವೃತ್ತ ಸೈನಿಕನ ಮನೆಯಲ್ಲಿ ದರೋಡೆ : ಲಕ್ಷಾಂತರ ಮೌಲ್ಯದ ನಗ-ನಗದು ಲೂಟಿ

ನಿವೃತ್ತ ಸೈನಿಕನ ಮನೆಯಲ್ಲಿ ದರೋಡೆ : ಲಕ್ಷಾಂತರ ಮೌಲ್ಯದ ನಗ-ನಗದು ಲೂಟಿ

ಪುತ್ತೂರು, ಮಾರ್ಚ್ 22 : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ದರೋಡೆ ನಡೆದಿದೆ.

ಪುತ್ತೂರು ತಾಲೂಕಿನ ಇಚ್ಲಂಪಾಡಿಯ ಮಾನಡ್ಕ ಎಂಬಲ್ಲಿ ಇಂದು ಮುಂಜಾನೆ ಈ ದರೋಡೆ  ಕೃತ್ಯ ನಡೆದಿದೆ.

ಇಲ್ಲಿನ ವೃದ್ದ ದಂಪತಿಗಳಿದ್ದ ಮನೆಯಲ್ಲಿ ಪಿಸ್ತೂಲ್ ಹಾಗೂ ತಲವಾರುಗಳನ್ನು ಝಳಪಿಸಿ ದರೋಡೆಕೋರಾರು ಲಕ್ಷಾಂತರ ಮೌಲ್ಯದ ನಗ-ನಗದುಗಳನ್ನು ದೋಚಿಕೊಂಡು ಹೋಗಿದ್ದಾರೆ.

ಈ ಮನೆ ನಿವೃತ್ತ ಸೈನಿಕ ನಾರಾಯಣ ಪಿಳ್ಳೆ ಎಂಬವರಿಗೆ ಸೇರಿದ್ದಾಗಿದ್ದು ಇಬ್ಬರು ದರೋಡೆಕೋರ ತಂಡ ಇದನ್ನು ನಡೆಸಿದ್ದಾಗಿ ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಹಿರಿಯ ಪೋಲಿಸ್ ಅಧಿಕಾರಿಗಳು, ಉಪ್ಪಿನಂಗಡಿ ಪೋಲೀಸರು, ಬೆರಳಚ್ಚು ತಂಡ ಹಾಗೂ ಶ್ವಾನದಳ ಧಾವಿಸಿದ್ದು. ಪರಿಶೀಲನೆ ನಡೆಸಲಾಗುತ್ತಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *