DAKSHINA KANNADA
ವಿಟ್ಲ – ಅರುಣ್ ಪುತ್ತಿಲ ರೋಡ್ ಶೋ ಗೆ ಹರಿದು ಬಂದ ಜನಸಾಗರ….!!
ಪುತ್ತೂರು, ಮೇ 5: ಬಿಜೆಪಿಯಿಂದ ಬಂಡಾಯ ಎದ್ದು ಪಕ್ಷೇತರನಾಗಿ ಸ್ಪರ್ಧಿಸಿರುವ ಅರುಣ್ ಪುತ್ತಿಲ ಪರ ಜನ ಬೆಂಬಲ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಯಾವುದೇ ಸ್ಟಾರ್ ಕ್ಯಾಂಪೆನರ್ ಇಲ್ಲದೆ ಅಭ್ಯರ್ಥಿಯೇ ವಿಟ್ಲದಲ್ಲಿ ನಡೆಸಿದ ರೋಡ್ ಶೋಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ವಿಟ್ಲ ಪೇಟೆಯಲ್ಲಿ ಎರಡು ಕಿಮೀ ಉದ್ದಕ್ಕೆ ನಡೆದ ರೋಡ್ ಶೋದಲ್ಲಿ 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸೇರಿದ್ದು, ಕೇಸರಿ ಕಲರವ ಮೂಡಿಸಿತ್ತು. ರೋಡ್ ಶೋ ಬಳಿಕ ಅರಮನೆ ಗದ್ದೆಯಲ್ಲಿ ಸಂಜೆ ಹೊತ್ತಿಗೆ ಸಮಾವೇಶ ನಡೆಯಿತು.
ಸಮಾವೇಶ ಉದ್ದೇಶಿಸಿ ಮಾತನಾಡಿದ ಅರುಣ್ ಪುತ್ತಿಲ, ಅಧಿಕಾರಕ್ಕಾಗಿ ಆಸೆ ಪಟ್ಟವನಲ್ಲ. ಕಾಂಗ್ರೆಸ್ ಹಾಗೂ ಎಸ್ಡಿಪಿಐ ವಿರುದ್ಧ ಹೋರಾಟದ ಭಾಗವಾಗಿ ಕಣಕ್ಕಿಳಿಯಬೇಕೆಂಬ ಕಾರ್ಯಕರ್ತರ ಆಶಯದಂತೆ ಸ್ಪರ್ಧಿಸುತ್ತಿದ್ದೇನೆ. ಇದರ ಹೊರತಾಗಿ ಯಾವುದೇ ಪಕ್ಷದ ವಿರುದ್ಧ ಹೋರಾಟ ಇದಲ್ಲ ಎಂದು ಹೇಳಿದರು.
ಸೌಮ್ಯಾ ಭಟ್, ಅಕ್ಷತಾ ಕೊಲೆ ಪ್ರಕರಣ, ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ನಮ್ಮ ಕಣ್ಣ ಮುಂದೆ ಹಾದು ಬರುತ್ತದೆ. ಹಿಂದುತ್ವದ ಹೆಸರಿನಲ್ಲಿ ಸ್ಪರ್ಧಿಸುತ್ತಿದ್ದೇನೆ. ಆರೆಸ್ಸೆಸ್ ಹಿರಿಯರು, ಮಠಾಧೀಶರು, ಸಂಘ ಪರಿವಾರದ ಕಾರ್ಯಕರ್ತರ ಆಶಯದಂತೆ ಸ್ಪರ್ಧಿಸುತ್ತಿದ್ದೇನೆ. ನೀವೆಲ್ಲ ನನ್ನ ಜೊತೆಗಿದ್ದೀರೆಂದು ನಂಬಿಕೊಂಡಿದ್ದೇನೆ ಎಂದರು.
You must be logged in to post a comment Login