Connect with us

    LATEST NEWS

    ಬಂಟ್ವಾಳ ಬ್ರಹ್ಮರಕೊಟ್ಲು ಬಳಿ ಭೀಕರ ರಸ್ತೆ ಅಪಘಾತ ಸ್ಥಳದಲ್ಲೇ ನಾಲ್ವರ ಸಾವು

    ಬಂಟ್ವಾಳ ಬ್ರಹ್ಮರಕೊಟ್ಲು ಬಳಿ ಭೀಕರ ರಸ್ತೆ ಅಪಘಾತ ಸ್ಥಳದಲ್ಲೇ ನಾಲ್ವರ ಸಾವು

    ಬಂಟ್ವಾಳ ಜುಲೈ 19: ಟವೇರಾ ಕಾರು ಹಾಗೂ ಗ್ಯಾಸ್ ಟ್ಯಾಂಕರ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟ ಘಟನೆ ಬಂಟ್ವಾಳದ ಬ್ರಹ್ಮರಕೂಟ್ಲು ಎಂಬಲ್ಲಿ ನಡೆದಿದೆ.

    ಬೆಂಗಳೂರು ಕಡೆಯಿಂದ ಬರುತ್ತಿದ್ದ ಕಾರು‌ ಹಾಗೂ ಮಂಗಳೂರು‌ ಕಡೆಯಿಂದ ಹೋಗುತ್ತಿದ್ದ ಟ್ಯಾಂಕರ್ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.

    ಕಾರಿನಲ್ಲಿ ಏಳು ಮಂದಿ ಪ್ರಯಾಣಿಕರಿದ್ದರೆನ್ನುವ ಮಾಹಿತಿಯಿದ್ದು, ನಾಲ್ವರು ಮೃತಪಟ್ಟಿದ್ದರೆ, ಮೂವರಿಗೆ‌ ಗಂಭೀರ ಗಾಯಗಳಾಗಿವೆ.
    ಕಾರಿನಲ್ಲಿದ್ದವರು ಭಟ್ಕಳ ಮೂಲದವರೆಂದು ತಿಳಿದು ಬಂದಿದ್ದು, ಗೋವಿಂದ, ಪದ್ಮಾವತಿ, ನಾಗರಾಜ, ಗಣೇಶ್ ಎಂದು ಗುರುತಿಸಲಾಗಿದೆ. ಬಂಟ್ವಾಳ ಸಂಚಾರಿ‌ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply