Connect with us

    LATEST NEWS

    ಕಾಂತಾರ ಭಾಗ 1ರ ಶೂಟಿಂಗ್ ನಡುವೆ ನೀಲಕಂಠ ಬಬ್ಬುಸ್ವಾಮಿ ದೈವದ ಆಶೀರ್ವಾದ ಪಡೆದ ರಿಷಭ್ ಶೆಟ್ಟಿ

    ಉಡುಪಿ ಜೂನ್ 18: ಕಾಂತಾರ ಭಾಗ 1 ರ ಶೂಟಿಂಗ್ ನಡೆಯುತ್ತಿರುವ ಬೆನ್ನಲ್ಲೇ ರಿಷಬ್ ಶೆಟ್ಟಿ ಸ್ಥಳೀಯ ದೈವ ದೇವಸ್ಥಾನಗಳ ಟೆಂಪಲ್ ರನ್ ನಡೆಸುತ್ತಿದ್ದಾರೆ. ಉಡುಪಿಯ ಬೈಲೂರು ಭಾಗದ ನೀಲಕಂಠ ಬಬ್ಬುಸ್ವಾಮಿ ದೈವಸ್ಥಾನದ ಸನ್ನಿಧಾನದಲ್ಲಿರುವ ಕೊರಗಜ್ಜನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.


    ಕಾಂತಾರ ಸಕ್ಸಸ್ ಬಳಿಕ ಇದೀಗ ಕಾಂತಾರ 1ರ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ರಿಷಭ್ ಶೆಟ್ಟಿ ಕುಟುಂಬ ಸಮೇತ ಉಡುಪಿಯ ಬೈಲೂರು ಭಾಗದ ನೀಲಕಂಠ ಬಬ್ಬುಸ್ವಾಮಿ ದೈವಸ್ಥಾನದ ಸನ್ನಿಧಾನದಲ್ಲಿರುವ ಕೊರಗಜ್ಜನಿಗೆ ಮಧ್ಯ, ಚಕ್ಕುಲಿ, ಬೀಡ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸನ್ನಿಧಾನದಲ್ಲಿರುವ ಬಬ್ಬುಸ್ವಾಮಿ, ಕೊರಗಜ್ಜ, ಬಳಿ ಪ್ರಾರ್ಥನೆ ಮಾಡಿದ ವೇಳೆ ಪಂಜುರ್ಲಿ ದೈವದ ಮೇಲೆ ಕಥೆ ನಿರ್ಮಿಸಿ ಎನ್ನುವ ನುಡಿ ಕೇಳಿ ಬಂದಿತ್ತಂತೆ. ಈ ಹಿನ್ನಲೆ ಕಾಂತಾರ ದೊಡ್ಡ ಸಕ್ಸಸ್ ಕಂಡಿತ್ತು. ಈ ಯಶಸ್ಸಿನ ಬಳಿಕ ಮತ್ತೆ ರಿಶಬ್ ಶೆಟ್ಟಿ ಪತ್ನಿ, ಮಕ್ಕಳ ಜೊತೆ ಆಗಮಿಸಿ ಕೊರಗಜ್ಜ, ಬಬ್ಬುಸ್ವಾಮಿ ಗೆ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿದ್ದಾರೆ.

    ಈಗಾಗಲೇ ನಡೆಯುತ್ತಿರುವ ಕಾಂತಾರ ಭಾಗ ೧ ಸಿನಿಮಾಗೂ ದೊಡ್ಡ ಮಟ್ಟದ ಯಶಸ್ಸು ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ ದೈವಸ್ಥಾನದ ಆಡಳಿತ ಮಂಡಳಿ ರಿಶಬ್ ಶೆಟ್ಟಿ ಕುಟುಂಬವನ್ನ ಗೌರವಿಸಿತು. ರಿಶಬ್ ಶೆಟ್ಟಿ ಬರೋದನ್ನೇ ಕಾಯುತ್ತಿದ್ದ ಅಭಿಮಾನಿಗಳು ಸೆಲ್ಪಿ ತೆಗೆದು ಖುಷಿಪಟ್ರು.

    Share Information
    Advertisement
    Click to comment

    You must be logged in to post a comment Login

    Leave a Reply