BANTWAL
ದುಷ್ಕರ್ಮಿಗಳಿಂದ ರಿಕ್ಷಾ ಚಾಲಕನೋರ್ವನ ಮೇಲೆ ಬರ್ಬರ ಹಲ್ಲೆ
ದುಷ್ಕರ್ಮಿಗಳಿಂದ ರಿಕ್ಷಾ ಚಾಲಕನೋರ್ವನ ಮೇಲೆ ಬರ್ಬರ ಹಲ್ಲೆ
ಕಡಬ, ಮೇ.13. ದುಷ್ಕರ್ಮಿಗಳ ತಂಡವೊಂದು ರಿಕ್ಷಾ ಚಾಲಕನೋರ್ವನಿಗೆ ಬರ್ಬರವಾಗಿ ಇರಿದು ಪರಾರಿಯಾದ ಘಟನೆ ನಡೆದಿದೆ.
ಕಡಬ ಸಮೀದ ನೆಕ್ಕಿತ್ತಡ್ಕ ಎಂಬಲ್ಲಿ ಈ ಘಟನೆ ನಡೆದಿದೆ. ಇರಿತಕ್ಕೊಳಗಾದ ರಿಕ್ಷಾ ಚಾಲಕನನ್ನು ಮರ್ಧಾಳ ನಿವಾಸಿ ಉಮೇಶ್ ಎಂದು ಗುರುತಿಸಲಾಗಿದೆ. ಈತ ಕಡಬದಿಂದ ಮರ್ಧಾಳ ಕಡೆಗೆ ತನ್ನ ರಿಕ್ಷಾದಲ್ಲಿ ತೆರಳುತ್ತಿದ್ದಾಗ ಬಾಜಿನಡಿ ಕ್ರಾಸ್ ಎಂಬಲ್ಲಿ ಕಾರಿನಲ್ಲಿ ಬಂದ ತಂಡವೊಂದು ರಿಕ್ಷಾವನ್ನು ಅಡ್ಡಗಟ್ಟಿ ಹಲ್ಲೆಗೆ ಪ್ರಯತ್ನಿಸಿದೆ.
ಆದರೆ ಅವರಿಂದ ತಪ್ಪಿಸಿಕೊಂಡು ಓಡಿದ ಉಮೇಶ್ ನನ್ನು ನೆಕ್ಕಿತ್ತಡ್ಕ ದರ್ಗಾ ಬಳಿ ತಂಡವೊಂದು ಹಿಗ್ಗಾಮುಗ್ಗಾ ಇರಿದಿದು ಪರಾರಿಯಾಗಿದೆ. ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
You must be logged in to post a comment Login