Connect with us

    LATEST NEWS

    ಮಂಗಳೂರು – ನಿವೃತ್ತ ಕರ್ನಲ್‌ ರತ್ನಕುಮಾರ್‌ ಅಡಪ ನಿಧನ

    ಮಂಗಳೂರು ಅಕ್ಟೋಬರ್ 12: ನಿವೃತ್ತ ಕರ್ನಲ್‌ ರತ್ನ ಕುಮಾರ್‌ ಅಡಪ (61 ) ಅಲ್ಪ ಕಾಲದ ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ.


    ಭಾರತೀಯ ಸೇನೆಯ ಬೆಂಗಳೂರಿನ ಪ್ಯಾರಾ ರೆಜಿಮೆಂಟ್‌ನ ನಿವೃತ್ತ ಕರ್ನಲ್‌ ರತ್ನ ಕುಮಾರ್‌ ಅಡಪ (61 ) ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ (ಅ.12ರಂದು) ಬೆಂಗಳೂರಿನಲ್ಲಿ ನಿಧನ ಹೊಂದಿದರು.
    ಮೂಲತಃ ಸೋಮವಾರ ಪೇಟೆಯವರಾಗಿರುವ ರತ್ನ ಕುಮಾರ್‌ ಅಡಪ ಅವರು 35 ವರ್ಷ ಕಾಲ ಸೇನೆಯಲ್ಲಿ ಸೇವೆಯಲ್ಲಿದ್ದು 2021ರಲ್ಲಿ ನಿವೃತ್ತರಾಗಿದ್ದರು. ಶನಿವಾರದಂದು ಬೆಂಗಳೂರಿನಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

    ಅವರು ಪತ್ನಿ ಶಾಂತಲಾ ಅಡಪ, ಮತ್ತು ಪುತ್ರ ಮೋಹಿತ್‌ ಶರಣ್‌ ಅಡಪ ಅವರನ್ನು ಅಗಲಿದ್ದಾರೆ. ಅ.13ರಂದು ಪದವು ಮೇಗಿನ ಮನೆಯ ಬಳಿ ಇರುವ ಅವರ ಸ್ವಗೃಹ “ಅರ್ಪಣಾ’ದಲ್ಲಿ ಮೃತರ ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು. ನಂತರ ಶಕ್ತಿನಗರದ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರವನ್ನು ಮಾಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply