Connect with us

LATEST NEWS

ಕೊರೊನಾಗೆ ಬಲಿಯಾದ ಆಜ್ ತಕ್ ನ ಸುದ್ದಿವಾಚಕ ರೋಹಿತ್ ಸರ್ದಾನ

ನವದೆಹಲಿ ಎಪ್ರಿಲ್ 30: ಕೊರೊನಾ ತನ್ನ ಮರಣ ಮೃದಂಗ ಮುಂದುವರೆಸಿದ್ದು, ಇದೀಗ ಮಾಧ್ಯಮಗಳಲ್ಲೂ ಸಾವು ನೋವಿನ ಸುದ್ದಿಗಳು ಬರಲಾರಂಭಿಸಿದೆ. ಆಜ್ ತಕ್ ಹಿಂದಿ ನ್ಯೂಸ್ ಚಾನೆಲ್ ನ ಹೆಸರಾತ ಸುದ್ದಿವಾಚಕ ರೋಹಿತ್ ಸರ್ದಾನ ಕೊರೊನಾಕ್ಕೆ ಬಲಿಯಾಗಿದ್ದಾರೆ.

ಹಿಂದಿ ಸುದ್ದಿ ಚಾನೆಲ್ ಆಜ್ ತಕ್ ನಲ್ಲಿ ಕೆಲಸ ಮಾಡುತ್ತಿದ್ದ 41 ವರ್ಷದ ರೋಹಿತ್ ಸರ್ದಾನಾ ಜನಪ್ರಿಯ ಚರ್ಚಾ ಕಾರ್ಯಕ್ರಮ ‘ದಂಗಲ್’ ಅನ್ನು ಆಯೋಜಿಸಿದ್ದರು. ಅವರಿಗೆ ಏ. 24 ರಂದು ಮಾರಣಾಂತಿಕ ಸೋಂಕು ದೃಢಪಟ್ಟಿತ್ತು.

ಆಜ್ ತಕ್ ಅವರ ಸಹೋದರ ಸಂಸ್ಥೆ ಇಂಗ್ಲಿಷ್ ನ್ಯೂಸ್ ಚಾನೆಲ್ ಇಂಡಿಯಾ ಟುಡೆ ಈ ಸುದ್ದಿಯನ್ನು ದೃಢಪಡಿಸಿದ್ದು, ‘ನಮ್ಮ ಆತ್ಮೀಯ ಸಹೋದ್ಯೋಗಿ ಮತ್ತು ಸ್ನೇಹಿತ ರೋಹಿತ್ ಸರ್ದಾನ ಅವರ ಅಕಾಲಿಕ ನಷ್ಟವು ನಮಗೆ ಆಘಾತವನ್ನುಂಟು ಮಾಡಿದೆ. ಇದು ತುಂಬಲಾರದ ನಷ್ಟ ಅದನ್ನು ಯಾವುದೇ ಪದಗಳಿಂದ ವಿವರಿಸಲು ಸಾಧ್ಯವಿಲ್ಲ. ಕುಟುಂಬಕ್ಕೆ ಶಕ್ತಿ ತುಂಬಲು ಪ್ರಾರ್ಥಿಸೋಣ’ ಎಂದಿದೆ.

 

ರೋಹಿತ್ ಸರ್ದಾನ ಅವರಿಗೆ ಎಪ್ರಿಲ್ 25 ರಂದು ಕೊರೊನಾ ಸೊಂಕು ದೃಢಪಟ್ಟಿದ್ದು ಅವರನ್ನು ದೆಹಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಇಂದು ಅವರಿಗೆ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *