Connect with us

LATEST NEWS

ಜಿಲ್ಲೆಯ ಜೆಡಿಎಸ್ ಮುಖಂಡರು ಕಾರ್ಯಕರ್ತರು ಕಾಂಗ್ರೇಸ್ ಗೆ ಬನ್ನಿ – ಮಾಜಿ ಸಚಿವ ರಮಾನಾಥ ರೈ

ಮಂಗಳೂರು ನವೆಂಬರ್ 30: ದೇಶದಲ್ಲಿ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಬಿಜೆಪಿ ಇದೀಗ ಕರ್ನಾಟಕದಲ್ಲೇ ವಂಶ ರಾಜಕಾರಣವನ್ನು ಬೆಳುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಾತ್ಯತೀತ ಹೆಸರೇಳಿ ಬಂದ ಪಕ್ಷ ಜೆಡಿಎಸ್ ಈಗ ಬಿಜೆಪಿ ಜತೆ ಹೊಂದಾಣಿಕೆ ಮಾಡಿದೆ. ಈ ಹಿನ್ನಲೆ ಜಿಲ್ಲೆಯ ಎಲ್ಲಾ ಜಾತ್ಯತೀತ ಸಿದ್ಧಾಂತ ಒಪ್ಪಿರುವ ಜೆಡಿಎಸ್ ನಲ್ಲಿರುವ ಮುಖಂಡರು ಕಾರ್ಯಕರ್ತರು ಕಾಂಗ್ರೆಸಿಗೆ ಸೇರಬೇಕು. ಯಾರೆಲ್ಲ‌ ಬರ್ತೀರಿ ನಾವು ಒಟ್ಟಾಗಿ ಕೆಲಸ ಮಾಡುವ. ನೀವೆಲ್ಲರೂ ಜಾತ್ಯತೀತ ಮನಸಿರುವ ಜನರು “ಕೈ” ಗೆ ಸೇರಬೇಕು. ಮತೀಯವಾದಿಗಳ ವಿರುದ್ಧ ಸಂಘಟಿತ ಹೋರಾಟ ಅನಿವಾರ್ಯ ಎಂದರು ಇದರಿಂದ ಪಕ್ಷಕ್ಕೆ ಜಾತ್ಯ ಚಳವಳಿಗೆ ಶಕ್ತಿ ಬರಲಿದೆ ಎಂದರು.

ಜಾತಿವಾದಿ ಶಕ್ತಿಗಳ ವಿರುದ್ಧ ಹೋರಾಟಕ್ಕೆ ಕೈಜೋಡಿಸಿ, ಕಾಂಗ್ರೆಸ್ ಜಾತ್ಯತೀತ ಸಿದ್ಧಾಂತ ಒಪ್ಪಿ ಬರೋರಿಗೆ ಸ್ವಾಗತ. ಅವರನ್ನು ಗೌರವಯುತವಾಗಿ ನೋಡಿಕೊಳ್ತೇವೆ. ನಮ್ಮ ಮೂಲ ಕಾರ್ಯಕರ್ತರಿಗೆ ಯಾವುದೇ ಸಮಸ್ಯೆ ಆಗಲ್ಲ. ಜೆಡಿಎಸ್ ನಲ್ಲಿ ಬಹಳ ಜನ ಅತೃಪ್ತಿಯಲ್ಲಿದ್ದಾರೆ. ತುಂಬ ಜನರ ಬಳಿ ಮಾತಾಡಿದ್ದೇನೆ, ಈಗ ಮುಕ್ತ ಆಹ್ವಾನ ನೀಡ್ತಿದೇವೆ ಎಂದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *