Connect with us

LATEST NEWS

ಭಕ್ತಿಯ ಪರಾಕಾಷ್ಠೆಗೆ ತಲೆ ಕತ್ತರಿಸಿ ದೇವರಿಗೆ ಅರ್ಪಿಸಿದ ದಂಪತಿ….!!

ರಾಜಕೋಟ್ ಎಪ್ರಿಲ್ 17: ದೇವರ ಮೇಲಿನ ಭಕ್ತಿಗೆ ದಂಪತಿಗಳಿಬ್ಬರು ತಮ್ಮ ತಲೆಯನ್ನು ಕತ್ತರಿಸಿ ದೇವರಿಗೆ ಅರ್ಪಿಸಿದ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ. ಹೀಗೆ ತಲೆಯನ್ನು ಕತ್ತರಿಸಿಕೊಳ್ಳಲು ಸ್ವತಃ ದಂಪತಿಯೇ ಮನೆಯಲ್ಲಿ ಶಿರಚ್ಛೇದದ ಯಂತ್ರವನ್ನು ಕೂಡಾ ರೂಪಿಸಿಕೊಂಡಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.


ದೇಹವನ್ನು ದೇವರಿಗೆ ಅರ್ಪಿಸಿಕೊಂಡ ದಂಪತಿಯನ್ನು ಹೇಮುಭಾಯ್‌ ಮಕ್ವಾನಾ (38) ಮತ್ತು ಹನ್ಸಾಬೆನ್‌ (35) ಎಂದು ಗುರುತಿಸಲಾಗಿದೆ. ಘಟನಾ ಸ್ಥಳದಲ್ಲಿ ಮರಣ ಪತ್ರವೊಂದು ಸಿಕ್ಕಿದ್ದು, ಅದರಲ್ಲಿ ತಮ್ಮ ವೃದ್ಧ ತಂದೆ ತಾಯಿ ಮತ್ತು ಇಬ್ಬರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಕುಟುಂಬದ ಸದಸ್ಯರನ್ನು ದಂಪತಿ ಕೋರಿದ್ದಾರೆ.


ರಾಜ್‌ಕೋಟ್‌ ಜಿಲ್ಲೆಯ ವಿಂಚಿಯ್ಯಾ ಗ್ರಾಮದ ಹೇಮುಭಾಯ್‌ ಮತ್ತು ಹನ್ಸಾಬೆನ್‌ ಕಳೆದೊಂದು ವರ್ಷದಿಂದ ತಮ್ಮ ಗುಡಿಸಿಲಿನಲ್ಲೇ ಭಾರೀ ಪ್ರಮಾಣದಲ್ಲಿ ದೇವರ ಪೂಜೆ ಮಾಡುತ್ತಾ ಕಾಲ ಕಳೆಯುತ್ತಿದ್ದರು. ಈ ಪ್ರಾರ್ಥನೆಯ ಮುಂದುವರೆದ ಭಾಗವಾಗಿ ದಂಪತಿ ತಮ್ಮ ದೇಹವನ್ನು ದೇವರಿಗೆ ಅರ್ಪಿಸಿಕೊಳ್ಳಲು ನಿರ್ಧರಿಸಿದ್ದರು.


ತಮ್ಮ ತಲೆಯನ್ನು ಕತ್ತರಿಸಿದ ಬಳಿಕ ಅದನ್ನು ಬೆಂಕಿಯ ಮೂಲಕ ದೇವರಿಗೆ ನೈವೇದ್ಯದ ರೂಪದಲ್ಲಿ ಅರ್ಪಿಸಲು ನಿರ್ಧರಿಸಿದ್ದ ದಂಪತಿ ಅದಕ್ಕೆಂದೇ ಮೊದಲಿಗೆ ಶಿರಚ್ಛೇದ ಸ್ಥಳದ ಮುಂಭಾಗದಲ್ಲೇ ಅಗ್ನಿಜ್ವಾಲೆಯನ್ನು ಹೊತ್ತಿಸಿದ್ದರು. ಬಳಿಕ ಶಿರಚ್ಛೇದದ ಯಂತ್ರಕ್ಕೆ ಇಬ್ಬರೂ ಒಟ್ಟಿಗೆ ತಲೆ ಕೊಟ್ಟಿದ್ದಾರೆ. ನಂತರ ಯಂತ್ರದ ಹಗ್ಗವನ್ನು ಸ್ವಯಂ ಎಳೆದಾಗ ಹರಿತವಾದ ಆಯುಧ ಮೇಲಿನಿಂದ ಕೆಳಗೆ ಜಾರಿ ಒಂದೇ ಹೊಡೆತಕ್ಕೆ ಇಬ್ಬರ ತಲೆಯೂ ತುಂಡಾಗಿದೆ. ಹೀಗಾಗಿ ತುಂಡಾದ ಎರಡೂ ರುಂಡಗಳು ಒಟ್ಟಿಗೆ ಹೋಗಿ ಅಗ್ನಿಜ್ವಾಲೆಗೆ ಸಿಕ್ಕಿ ಆಹುತಿಯಾಗಿದೆ. ಶನಿವಾರ ರಾತ್ರಿ ನಡೆದ ಈ ದುರ್ಘಟನೆ ಬಗ್ಗೆ ಭಾನುವಾರ ಬೆಳಗ್ಗೆ ಕುಟುಂಬ ಸದಸ್ಯರಿಗೆ ಮಾಹಿತಿ ಸಿಕ್ಕಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *