Connect with us

    LATEST NEWS

    ಭಾವನೆಯಿಲ್ಲದ ಕಟೋರಿಗಳಿಗೆ ಕಣ್ಣೀರು ಬರುವುದಿಲ್ಲ – ಶಾಸಕ ರಘುಪತಿ ಭಟ್

    ಉಡುಪಿ ಜುಲೈ 26: ಬಿ.ಎಸ್ ಯಡಿಯೂರಪ್ಪ ಎರಡು ವರ್ಷ ಯಶಸ್ವಿ ಆಡಳಿತ ನಡೆಸಿದ್ದಾರೆ. ರಾಜೀನಾಮೆ ನೀಡಿದ್ದು ಪಕ್ಷದ ಕಾರ್ಯಕರ್ತರೆಲ್ಲರಿಗೆ ಬೇಸರದ ಸಂಗತಿ, ಪ್ರವಾಹ ಮತ್ತು ಕೊರೋನಾ ಸಂಕಷ್ಟವನ್ನು ಮೀರಿ ಉತ್ತಮ ಆಡಳಿತ ನಡೆಸಿದ್ದಾರೆ. ಕರಾವಳಿ ಜಿಲ್ಲೆಗಳಿಗೆ ಯಡಿಯೂರಪ್ಪ ಬಹಳ ಸಹಕಾರ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಬಿ.ಎಸ್ ಯಡಿಯೂರಪ್ಪ ನವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.


    ರಾಜೀನಾಮೆ ಸಂದರ್ಭ ಸಿಎಂ ಯಡಿಯೂರಪ್ಪ ಕಣ್ಣೀರು ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಭಾವನಾತ್ಮಕ ಜೀವಿಗಳಿಗೆ ಕಣ್ಣೀರು ಬರುತ್ತದೆ, ಭಾವನೆಯಿಲ್ಲದ ಕಟೋರಿ ಗಳಿಗೆ ಕೇವಲ ವ್ಯವಹಾರ ನಡೆಸುವವರಿಗೆ ಕಣ್ಣೀರು ಬರುವುದಿಲ್ಲ. ಯಡಿಯೂರಪ್ಪನವರಿಗೆ ಕಣ್ಣೀರು ಬಂದಿರುವುದು ಸ್ವಾಭಾವಿಕ ಎಂದ ಅವರು ಡಿಕೆಶಿ ಸಿದ್ದರಾಮಯ್ಯ ಕಠೋರ ಮನಸ್ಸಿನ ಆ ಇಬ್ಬರಿಗೆ ಕಣ್ಣೀರು ಬರುವುದಿಲ್ಲ ಎಂದರು.

    ಇನ್ನು ಯಡಿಯೂರಪ್ಪ ಒತ್ತಡದಿಂದ ರಾಜೀನಾಮೆ ಕೊಟ್ಟದ್ದಲ್ಲ, ಪಕ್ಷದ ಸಿದ್ಧಾಂತವನ್ನು ಒಪ್ಪಿ ಸಂತೋಷದಿಂದ ರಾಜೀನಾಮೆ ಕೊಟ್ಟಿದ್ದಾರೆ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply