LATEST NEWS
ಮಂಗಳೂರು- ಶಿರೂರು ಪರಿಶೀಲನೆ ಬಳಿಕ ಕೆತ್ತಿಕಲ್ ಪ್ರದೇಶಕ್ಕೆ ಬರಲಿರುವ ತಜ್ಞರ ತಂಡ
ಮಂಗಳೂರು ಜುಲೈ 29: ಗುಡ್ಡ ಜರಿ ಉಂಟಾಗಿರುವ ಕೆತ್ತಿಕಲ್ ಪ್ರದೇಶಕ್ಕೆ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭೇಟಿ ನೀಡಿದರು.
ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಎಸ್ ಸೆಲ್ವಕುಮಾರ್ ಐಎಎಸ್ ಅವರು ಕೆತ್ತಿಕಲ್ ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿದರು. ಈ ವೇಳೆ ವೇಳೆ ಕುಸಿತ ಪ್ರದೇಶದಲ್ಲಿ ಅಧಿಕಾರಿಗಳು ಸ್ಥಳೀಯರಿಂದ ಮಾಹಿತಿಯನ್ನು ಪಡೆದರು. ಈ ವೇಳೆ ಕುಸಿತ ಪ್ರದೇಶಕ್ಕೆ ಸರ್ಕಾರದ ನುರಿತ ಇಂಜಿನಿಯರ್ ಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು. ಕುಸಿತದ ಬಗ್ಗೆ ಮತ್ತು ಪರಿಹಾರಗಳ ಕುರಿತು ತಜ್ಞರಿಂದ ವರದಿ ಪಡೆಯುವಂತೆ ಡಾ. ಸೆಲ್ವಕುಮಾರ್ ಐಎಎಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಲ್ಲದೆ ಈಗಾಗಲೇ ಶಿರೂರು ಕುಸಿತ ಪ್ರದೇಶದಲ್ಲಿರುವ ತಜ್ಞರ ತಂಡವನ್ನು ಇಲ್ಲಿಗೆ ಕರೆಸಲು ಸೂಚಿಸಲಾಗಿದ್ದು ಅವರು ಶಿರೂರು ಪರಿಶೀಲನೆ ಬಳಿಕ ಕೆತ್ತಿಕಲ್ ಪ್ರದೇಶಕ್ಕೆ ಬರಲಿದ್ದಾರೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ ನೀಡಿದರು. ಈ ವೇಳೆ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಸರ್ಕಾರದ ನುರಿತ ಇಂಜಿನಿಯರ್, ಮನಪ ಆಯುಕ್ತ ಆನಂದ್, ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಮಂಗಳೂರು ತಹಶಿಲ್ದಾರ್, ಎಚ್ಎಚ್ಐ ಅಧಿಕಾರಿಗಳು ಉಪಸ್ಥಿತರಿದ್ದರು.
You must be logged in to post a comment Login