Connect with us

    DAKSHINA KANNADA

    ಪುತ್ತೂರು ಶಾಸಕರು ಮಹಿಳೆ ಜೊತೆ ಇರುವಂತಹ ಫೋಟೋ ಬಗ್ಗೆ ಜನತೆಗೆ ಸ್ಪಷ್ಟನೆ ನೀಡಬೇಕು: ಅಮಳ ರಾಮಚಂದ್ರ

    ಪುತ್ತೂರು, ಎಪ್ರಿಲ್ 10: ಪುತ್ತೂರು ಶಾಸಕರು ಮಹಿಳೆ ಜೊತೆ ಇರುವಂತಹ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಶಾಸಕರು ಜನತೆಗೆ ಸ್ಪಷ್ಟನೆ ನೀಡಬೇಕು ಎಂದು ಕೆ.ಪಿ.ಸಿ.ಸಿ‌ ವಕ್ತಾರ ಅಮಳ ರಾಮಚಂದ್ರ ಒತ್ತಾಯಿಸಿದ್ದಾರೆ.

    ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ‌ ಅವರು‌ ಕಳೆದ ಮೂರು ದಿನಗಳ ಹಿಂದೆ ಈ ಫೋಟೋಗಳು ವೈರಲ್ ಆಗಿದ್ದು,ಈ ಫೋಟೋವಿಗೂ, ಶಾಸಕರಿಗೂ ಇರುವ ಸಂಬಂಧವೇನು ಅನ್ನೋದನ್ನು ಶಾಸಕರು ಜನರಿಗೆ ತಳಿಸಬೇಕು.

    ಮಾತೆತ್ತಿದರೆ ಮಹಿಳೆಯರನ್ನು ಮಾತೆ ಎನ್ನುವ ಬಿಜೆಪಿಗರ ಹಣೆಬರಹ ಎಂ.ಪಿ.ರೇಣುಕಾಚಾರ್ಯರಿಂದ ಹಿಡಿದು ಪುತ್ತೂರು ಶಾಸಕರ ವರೆಗಿನ ಫೋಟೋ ತನಕ ಬೀದಿಗೆ ಬಂದಿದೆ. ಈ ಫೋಟೋದ ಸತ್ಯಾಸತ್ಯತೆಯನ್ನು ಪೋಲೀಸರು ತನಿಖೆಯಲ್ಲಿ ಬಹಿರಂಗಪಡಿಸಬೇಕು.

    ಶಾಸಕರೇ ತಮ್ಮ ಆಪ್ತರಲ್ಲಿ ಹೇಳಿಕೊಂಡಂತೆ ಈ ಫೋಟೋಗಳನ್ನು ಬಿಜೆಪಿಯಲ್ಲಿರುವ ಅವರ ರಾಜಕೀಯ ವಿರೋಧಿಗಳೇ ಮಾಡಿದ್ದು, ಓರ್ವ ಮಹಿಳೆಯನ್ನು ಅವಮಾನ ಮಾಡಿದ ಇಂಥಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply