Connect with us

DAKSHINA KANNADA

ಪುತ್ತೂರು : ನಿದ್ದೆಯ ಮಂಪರಿಗೆ ರಸ್ತೆ ಬಿಟ್ಟು ಚರಂಡಿ ಸೇರಿದ ಮಾರುತಿ ಆಮ್ನಿ..!!

ಪುತ್ತೂರು : ನಿದ್ದೆಯ ಮಂಪರಿಗೆ ರಸ್ತೆ ಬಿಟ್ಟು ಮಾರುತಿ ಆಮ್ನಿ ಕಾರೊಂದು ಪಕ್ಕದ ಚರಂಡಿ ಸೇರಿದ ಘಟನೆ ದಕ್ಷಿಣ ಕನ್ನಡದ ಪುತ್ತೂರಿನ ( puttur ) ತಿಂಗಳಾಡಿ ಬಡಕೋಡಿ ರಸ್ತೆಯ ನೆಕ್ಕಿಲು ಎಂಬಲ್ಲಿ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದ್ದು ಚಾಲಕ ನಿದ್ರೆಯ ಮಂಪರಿನಲ್ಲಿದ್ದ ಎಂದು ಹೇಳಲಾಗಿದೆ. ವಾಹನದಲ್ಲಿ  ಚಾಲಕ ಮಾತ್ರವಿದ್ದು ಯಾವುದೇ ಅಪಾಯಗಳಿಲ್ಲದೇ ಪಾರಾಗಿದ್ದಾರೆ.  ರೆಂಜಲಾಡಿ ನಿವಾಸಿ ರಫೀಕ್ ಎಂಬವರು ಈ  ವಾಹನ ಚಲಾಯಿಸುತಿದ್ದು ತಿಂಗಳಾಡಿಯಿಂದ ರೆಂಜಲಾಡಿಗೆ ತೆರಳುತ್ತಿತ್ತು. ನಿದ್ದೆ ಮಂಪರು ಆವರಿಸಿದ್ದರಿಂದ ವಾಹನ ಹತೋಟಿ ಕಳೆದುಕೊಂಡು ರಸ್ತೆಯಿಂದ  ಅನತಿ  ದೂರದಲ್ಲಿದ  ಚರಂಡಿಗೆ ಉರುಳಿದೆ. ವಾಹನ ಉರುಳಿಬಿದ್ದ ಸಮೀಪದಲ್ಲೆ ವಿದ್ಯುತ್ ಕಂಬವಿತ್ತು, ಅದಕ್ಕೆ ಢಿಕ್ಕಿ  ಹೊಡೆಯುತ್ತಿದ್ದರೇ ಭಾರಿ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು.ಸ್ಥಳೀಯರ ನೆರವಿನಿಂದ ಕ್ರೇನ್ ತರಿಸಿ  ಆಮ್ನಿಯನ್ನು ಮೇಲಕ್ಕೆತ್ತಲಾಗಿದ್ದು ವಾಹನ ಸಂಪೂರ್ಣ ಜಖಂಗೊಂಡಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *