Connect with us

BELTHANGADI

ಬೆಳ್ತಂಗಡಿಯಲ್ಲಿ 19 ರ ಹರೆಯದ ಗರ್ಭಿಣಿ ಹೃದಯಾಘಾತಕ್ಕೆ ಬಲಿ..!

ಬೆಳ್ತಂಗಡಿ :ಗರ್ಭಿಣಿ ಮಹಿಳೆ ಹೃದಯಾಘಾತಕ್ಕೆ ಬಲಿಯಾದ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕಲ್ಮಂಜ ಆದರ್ಶ ನಗರದಲ್ಲಿ ನಡೆದಿದೆ.

ಆದರ್ಶ ನಗರದ ಹಮೀದ್‌, ನಝೀಮರವರ 2ನೇ ಪುತ್ರಿ ನಿಶ್ಬಾ (19) ಹೃದಯಾಘಾತದಿಂದ ತಮ್ಮ ಗಂಡನ ಮನೆಯಲ್ಲಿ ನಿಧನರಾಗಿದ್ದಾರೆ. ಮೃತ  ನಿಶ್ಬಾ ಕುಂಟಿನಿ ನಿವಾಸಿ ಖಾಲಿದ್‌ ಉಸ್ಮಾನ್‌ ಅವರ ಸೊಸೆಯಾಗಿದ್ದು ಇವರಿಗೆ ಮದುವೆಯಾಗಿ 9 ತಿಂಗಳಾಗಿದ್ದು, ಇವರು 4 ತಿಂಗಳ ಗರ್ಭಿಣಿಯಾಗಿದ್ದರು ಎಂದು ವರದಿಯಾಗಿದೆ.

ಸಣ್ಣ ಪ್ರಾಯದ ಮಹಿಳೆಯರಿಗೆ ಹೃದಯಾಘಾತ ಸಂಭವಿಸುವುದು ತೀರಾ ಅಪರೂಪವಾಗಿದೆ. ಮಹಿಳೆಯರು ಮೆನೋಪಾಸ್ ಆಗುವ ತನಕ ಅವರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಹುತೇಕ ಮುಕ್ತರು ಎಂದು ವೈದ್ಯಲೋಕ ಹೇಳುತ್ತಿದೆ. ಅದರಲ್ಲೂ ಗರ್ಭವತಿ ಮಹಿಳೆಯರು ಅತ್ಯಂತ ಸುರಕ್ಷಿತರು ಎಂದೂ ನಂಬಲಾಗಿತ್ತು. ಆದರೆ ಸಣ್ಣ ಪ್ರಾಯದ ಈ ಬಸುರಿಯ ಅನಿರೀಕ್ಷಿತ ಸಾವು ಕುಟುಂಬಸ್ಥರನ್ನು ಆತಂಕಕ್ಕೆ ದೂಡಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *